ಬ್ಯಾಟ್​ ಹಿಡಿದು ಫೀಲ್ಡಿಗಿಳಿದ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ!! - mayor cup 2020 organized in tumkur

🎬 Watch Now: Feature Video

thumbnail

By

Published : Dec 13, 2020, 10:31 AM IST

ಕ್ರೀಡೆಯಲ್ಲಿ ಗೆದ್ದಾಗ ಮತ್ತು ಸೋತಾಗ ಅದನ್ನು ಸಮಾನವಾಗಿ ತೆಗೆದುಕೊಳ್ಳುವುದೇ ಕ್ರೀಡಾಸ್ಫೂರ್ತಿ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಮೇಯರ್ಸ್ ಕಪ್ -2020' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ರು. ಜೀವನದಲ್ಲಿ ಸುಖ-ದುಃಖ ಹೇಗೆ ಇರುತ್ತದೆಯೋ ಅದೇ ರೀತಿ ಕ್ರೀಡೆಯಲ್ಲಿಯೂ ಸೋಲು-ಗೆಲುವು ಇರುತ್ತದೆ. ಹಾಗಾಗಿ ಸೋತಾಗಲೂ ಗೆದ್ದಂತಹ ಮನಸ್ಥಿತಿಯನ್ನು ಹೊಂದಿದಾಗ ಮಾತ್ರ ಅವರು ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದು ಹೇಳಿದ್ರು. ಇದೇ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಕ್ರೀಡಾಪಟುಗಳನ್ನು ಉತ್ಸಾಹಿಸಲು ಕ್ರಿಕೆಟ್​ ಆಡಲು ಟಾಸ್ ಹಾಕುವ ಜೊತೆಗೆ ಕೆಲಕಾಲ ಬ್ಯಾಟಿಂಗ್ ಕೂಡ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.