thumbnail

By

Published : Mar 25, 2020, 11:04 PM IST

ETV Bharat / Videos

ಕೋವಿಡ್​-19 ಆತಂಕದಿಂದ ಸ್ವಯಂ ಪ್ರೇರಿತ ದಿಗ್ಬಂಧನ ವಿಧಿಸಿಕೊಂಡ‌ ಗ್ರಾಮಸ್ಥರು

ಮೈಸೂರು: ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಯಾರು ಬರದಂತೆ ಹಾಗೂ ಗ್ರಾಮದಿಂದ ಹೊರ ಹೋಗದಂತೆ ತಾಲೂಕಿನ ಸಾತಗಳ್ಳಿ ಗ್ರಾಮದ ಮುಖಂಡರು ಸ್ವಯಂ ಪ್ರೇರಿತ ದಿಗ್ಬಂಧನ ವಿಧಿಸಿಕೊಂಡಿದ್ದಾರೆ.‌ ವಿದೇಶಗಳಿಂದ ಬಂದಿರುವ ಹಲವರಿಗೆ ಹೋಂ‌ ಕ್ವಾರಂಟೈನ್ ವಿಧಿಸಿದ್ದರೂ ಈ ನಿಯಮವನ್ನು ಈಗಾಗಲೇ ಇಬ್ಬರು ಉಲ್ಲಂಘನೆ ಮಾಡಿ ಎಫ್ಐಆರ್ ದಾಖಲಾಗುವಂತೆ ಮಾಡಿಕೊಂಡಿದ್ದಾರೆ. ಆದರೆ ಸಾತಗಳ್ಳಿ ಗ್ರಾಮಸ್ಥರು ಸ್ವಯಂ ಪ್ರೇರಿತ ನಿರ್ಬಂಧ ಹಾಕಿಕೊಂಡು ಸಾಮಾಜಿಕ‌ ಕಾಳಜಿ ಮೆರೆದಿದ್ದಾರೆ. ಇನ್ನು ಮೈಸೂರು ನಗರದಲ್ಲಿ ಅನಾವಶ್ಯಕವಾಗಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.