ನೆರೆ ನಿಂತರೂ ನಿಂತಿಲ್ಲ ಸಂತ್ರಸ್ತರ ಗೋಳು: ಸರ್ಕಾರ ಗಪ್ಚುಪ್, ಕಷ್ಟ ಕೇಳೋರು ಯಾರು?
ನೆರೆ ಬಂದು ನಿಂತು ನಾಲ್ಕು ತಿಂಗಳಾಯ್ತು. ಆದರೂ ಪ್ರವಾಹ ಸಂತ್ರಸ್ತರ ಗೋಳಿಗೆ ಕೊನೆ ಇಲ್ಲದಂತಾಗಿದೆ. ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಗಳು ಬೊಬ್ಬೆ ಹೊಡೆದರೂ ನೂರಾರು ಕುಟುಂಬಗಳು ನಿರೀಕ್ಷೆ ಕಂಗಳ ಹೊತ್ತು ಇನ್ನೂ ಪರಿಹಾರಕ್ಕೆ ಕಾದು ಕುಳಿತಿವೆ. ಬಿದ್ದೋದ ಮನೆ ನಿರ್ಮಾಣದ ಕನಸಿನೊಂದಿಗೆ ಜೀವನ ರೂಪಿಸಿಕೊಳ್ಳೋ ಜನರ ಆಶೋತ್ತರ ಆಶೋತ್ತರವಾಗಿಯೇ ಉಳಿದಿದೆ. ಇಲ್ಲಿದೆ ಪ್ರವಾಹ ಪೀಡಿತರ ಪಡಿಪಾಟಲಿನ ಸಂಕಷ್ಟದ ವರದಿ.