'ಮಿಸ್ಟರ್ ಚಿಕ್ಕಮಗಳೂರು' ಕನಸು ಕಂಡ ಕಟ್ಟುಮಸ್ತಿನ ಯುವಕನ ದಾರುಣ ಅಂತ್ಯ!
ಆ ಕಟ್ಟುಮಸ್ತಿನ ಹುಡುಗ ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ತನ್ನೂರಿನಲ್ಲೇ ತಾನು ಏನೆಂಬುದನ್ನು ತೋರಿಸಬೇಕು ಅಂತ ಪಣತೊಟ್ಟು ಕಾಫಿನಾಡಿಗೆ ಹಿಂದಿರುಗಿದ್ದಾನೆ. ಮಿಸ್ಟರ್ ಚಿಕ್ಕಮಗಳೂರು ಆಗ್ಬೇಕು ಅನ್ನೋ ಕನಸು ಬೇರೆ ಆತನಿಗಿತ್ತು. ಅದಕ್ಕೆ ತಕ್ಕಂತೆ ಕಸರತ್ತು ಕೂಡ ಮಾಡುತ್ತಿದ್ದ. ಆದ್ರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನೋ ಹಾಗೆ ಆ ಕನಸುಗಾರನ ಕನಸುಗಳೆಲ್ಲಾ ಆತನೊಂದಿಗೆ ಸಮಾಧಿಯಾಗಿವೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ..