thumbnail

By

Published : Apr 14, 2020, 3:28 PM IST

ETV Bharat / Videos

ಕೊರೊನಾ ಹೊರತಾದ ಸಮಸ್ಯೆಗಳಿಗೂ ಸ್ಪಂದನೆ: ಮಾಳವಿಕಾ ಅವಿನಾಶ್ ಕಳಕಳಿ​

ಕೊವಿಡ್ಡೇತರ ಸಮಸ್ಯೆಗಳಾದ ಆಹಾರ ಸಮಸ್ಯೆ , ಬೇರೆ-ಬೇರೆ ಚಿಕಿತ್ಸೆಗೆ ಸ್ಪಂದಿಸುವುದಕ್ಕಾಗಿ ರಾಜ್ಯ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಈಟಿವಿ ಭಾರತ ಜೊತೆ ಟಾಸ್ಕ್ ಫೋರ್ಸ್ ಸದಸ್ಯೆ ಮಾಳವಿಕಾ ಅವಿನಾಶ್​ ಮಾತನಾಡಿ, ಮುಖ್ಯಮಂತ್ರಿಗಳ ಪ್ರಮುಖ ಸೂಚನೆ ಅಂದ್ರೆ ಯಾರೂ ಸಹ ಹಸಿವಿನಿಂದ ಇರಬಾರದು, ರಾಜ್ಯವನ್ನ ಹಸಿವು ಮುಕ್ತಗೊಳಿಸಬೇಕೆಂಬುದು. ವಲಸೆ ಬಂದವರು, ಕಟ್ಟಡ ಕಾರ್ಮಿಕರ ಬಗ್ಗೆ , ನೆಲೆ ಇಲ್ಲದೇ ಊಟದ ತೊಂದರೆ ಇರುವವರನ್ನ ನಾವು ಹುಡುಕಿ ಸಹಾಯ‌ ಮಾಡುತ್ತಿದ್ದೇವೆ‌. ತಂಡದಲ್ಲಿ ಹತ್ತು ಸಾವಿರ ಜನ ಇದ್ದು ಸ್ವಯಂ ಸೇವಕರು, ಶೌರ್ಯಚಕ್ರ ಪಡೆದವರು, ಸಿವಿಲ್ ಡಿಫೆನ್ಸ್ ಪೊಲೀಸರು ಇದ್ದಾರೆ. ಲಾಕ್​ಡೌನ್ ಮುಂದುವರೆದಿದ್ದು, ಪ್ರಧಾನಿ ಮೋದಿ ಮಾತನ್ನ ಪ್ರತಿಯೊಬ್ಬರು ಆಲಿಸಬೇಕು. ಮುಂದೆ ಸ್ವಲ್ಪ ಕಷ್ಟ ಆಗಬಹುದು. ಆದರೆ, ಎಲ್ಲರೂ ಮನೆಯಲ್ಲಿಯೇ ಇರಿ. ಬಡ ಜನರಿಗೆ ತೊಂದರೆಯಾದರೆ ನಾವಿದ್ದೇವೆ ಎಂದು ಭರವಸೆ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.