thumbnail

By

Published : Jan 9, 2020, 1:48 PM IST

Updated : Jan 9, 2020, 3:19 PM IST

ETV Bharat / Videos

ಐತಿಹಾಸಿಕ ಆನೆಗುಂದಿ ಉತ್ಸವ: ಮೆರವಣಿಗೆಗೆ ರಂಗು ನೀಡಿದ ಕಲಾತಂಡಗಳು- ವಿಡಿಯೋ

ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಐತಿಹಾಸಿಕ ಆನೆಗುಂದಿ ಉತ್ಸವ ನಡೆಯಲಿದೆ. ಉತ್ಸವದ ಹಿನ್ನೆಲೆಯಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಆನೆಗುಂದಿ ಬಳಿಯ ದುರ್ಗಾದೇವಿ ದೇವಸ್ಥಾನದ ಬಳಿಯಿಂದ ಶಾಸಕ ಪರಣ್ಣ ಮುನವಳ್ಳಿ ಅವರು ಮೆರವಣಿಗೆಗೆ ಚಾಲನೆ‌ ನೀಡಿದರು. ಸಾರೋಟ್​ನಲ್ಲಿ ದುರ್ಗಾದೇವಿ ಮೂರ್ತಿ ಹಾಗೂ ಅಲಂಕಾರಗೊಂಡಿದ್ದ ವಾಹನದಲ್ಲಿ ಕನ್ನಡಮ್ಮನ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ಜಾಂಝ್ ಮೇಳ, ಕರಡಿಮಜಲು, ಕೋಲಾಟ ತಂಡ, ಹಗಲುವೇಷಗಾರರ ಕಲಾತಂಡ ಸೇರಿದಂತೆ ಅನೇಕ ಕಲಾತಂಡಗಳು ಮೆರವಣಿಗೆಗೆ ರಂಗು ನೀಡಿದವು. ಇನ್ನು ಮೆರವಣಿಗೆ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರು ತಮಟೆ, ಡೊಳ್ಳು ಹಾಗೂ ತಾಳ ಬಾರಿಸುವ ಮೂಲಕ ಕಲಾತಂಡಗಳಿಗೆ ಹುರುಪು ತುಂಬಿದರು. ಸಚಿವ ಸಿ.ಟಿ. ರವಿಯೊಂದಿಗೆ ಕಲಾವಿದರು ಫೋಟೋ ತೆಗೆಸಿಕೊಂಡು‌ ಖುಷಿಪಟ್ಟರು.
Last Updated : Jan 9, 2020, 3:19 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.