ಮಂಡ್ಯದಲ್ಲಿ ಎರಡು ದಿನದಿಂದ ಸುರಿದ ಮಳೆಗೆ ಕೋಡಿ ಬಿದ್ದ ಕೆರೆ: ಅಪಾರ ಪ್ರಮಾಣದ ಬೆಳೆ ನಾಶ - ಮಂಡ್ಯದಲ್ಲಿ ಭಾರೀ ಮಳೆ
🎬 Watch Now: Feature Video

ಮಂಡ್ಯದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ಬೆಳೆ ನಾಶವಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಸಿಂದಘಟ್ಟ ಗ್ರಾಮದಲ್ಲಿ ನಡೆದಿದೆ. ನಿನ್ನೆ ಸುರಿದ ಭಾರೀ ಮಳೆಯ ನೀರು ಹಾಗೂ ಹೇಮಾವತಿ ನಾಲೆಯ ನೀರು ಕೆರೆಯಲ್ಲಿ ಸೇರಿದ ಪರಿಣಾಮ ಕೆರೆಯ ಕೋಡಿ ಒಡೆದು ಭತ್ತ, ರಾಗಿ ಹಾಗೂ ಕಬ್ಬಿನ ಬೆಳೆಗೆ ನುಗಿದ್ದು, ರೈತರ ಸ್ಥಿತಿ ಚಿಂತಾಜನಕವಾಗಿದೆ. ಬೆಳೆಗೆ ನೀರು ನುಗ್ಗಿದ ಹಿನ್ನೆಲೆ ಕಂಗೆಟ್ಟ ರೈತರು, ನಷ್ಟಕ್ಕೆ ಪರಿಹಾರ ನೀಡಬೇಕು ಹಾಗೂ ಕೂಡಲೇ ಕೆರೆ ಕೋಡಿ ದುರಸ್ತಿ ಮಾಡಿಸಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.
Last Updated : Oct 16, 2019, 12:03 PM IST