ಶವಸಂಸ್ಕಾರಕ್ಕೂ ಮಳೆ ಅಡ್ಡಿ, ನೀರಿನಲ್ಲೇ ಕೆಟ್ಟು ನಿಂತ ಶಾಂತಿ ವಾಹನ.. - ಗದಗ ಮಳೆ ಅವಾಂತರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4847613-thumbnail-3x2-chai.jpg)
ಗದಗನಲ್ಲಿ ಮಳೆರಾಯನ ಅವಾಂತರ ಇನ್ನೂ ನಿಂತಿಲ್ಲ. ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ಮಳೆ ನೀರು ಶವಸಂಸ್ಕಾರಕ್ಕೂ ಅಡ್ಡಿ ಮಾಡಿದೆ. ಗದಗನ ರೆಹಮತ್ ನಗರದಲ್ಲಿ ನಡೆದ ಘಟನೆ ಇದಾಗಿದ್ದು ಬ್ರಿಡ್ಜ್ ಕೆಳಗೆ ನಿಂತಿರುವ ನೀರಿನಲ್ಲಿ ಶವಯಾತ್ರೆ ಸಾಗಿದೆ. ಈ ಮಧ್ಯೆ ಶವ ಸಾಗಿಸಬೇಕಾದ್ರೆ ರೈಲ್ವೆ ಅಂಡರ್ ಪಾಸ್ನಲ್ಲಿನ ನೀರಿನಲ್ಲಿ ಶವಯಾತ್ರೆ ವಾಹನ ಕೆಟ್ಟು ನಿಂತಿದೆ. ಪರಿಣಾಮ ನಡುನೀರಿನಲ್ಲಿ ಶವಯಾತ್ರೆ ವಾಹನ ಸಿಲುಕಿದ ಪರಿಣಾಮ ಶವ ಸಂಸ್ಕಾರಕ್ಕೆ ಅಡ್ಡಿಯಾಗಿದೆ. ಇದರಿಂದ ಮೃತರ ಕುಟುಂಬಸ್ಥರು ನೀರಿನಲ್ಲೇ ನಡೆದು ಸ್ಮಶಾನ ತಲುಪಿದ್ದಾರೆ.