ಸುತ್ತೂರಲ್ಲಿ ಜಾತ್ರಾ ಸಂಭ್ರಮ: ರೈತರ ಗಮನ ಸೆಳೆಯುತ್ತಿದೆ ಕೃಷಿಮೇಳ
ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ಹಾಗೂ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಎತ್ತ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ಸಸಿಗಳು, ವಿವಿಧ ತಳಿಯ ಜಾನುವಾರುಗಳು ಸೇರಿದಂತೆ ವಸ್ತು ಪ್ರದರ್ಶನವನ್ನು ರೈತರು ಮತ್ತು ಭಕ್ತರು ಕಣ್ತುಂಬಿಕೊಂಡರು.