ಆತ್ಮ ನಿರ್ಭರ ಭಾರತ ಅಭಿಯಾನ: ಶಿಕ್ಷಣ ತಜ್ಞ ಪ್ರೋ. ಕೆ.ಇ. ರಾಧಾಕೃಷ್ಣ ಸಂದರ್ಶನ - 5ನೇ ಹಾಗೂ ಅಂತಿಮ ಸುತ್ತಿನ ಆರ್ಥಿಕ ಪ್ಯಾಕೇಜ್
🎬 Watch Now: Feature Video

ಬೆಂಗಳೂರು: ಕೊರೊನಾದಿಂದ ನಲುಗಿರುವ ದೇಶದ ಆರ್ಥಿಕತೆಗೆ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿಯ ಪ್ಯಾಕೇಜ್ನ್ನು ಘೋಷಣೆ ಮಾಡಿದ್ದಾರೆ. ಇಂದು 5ನೇ ಮತ್ತು ಅಂತಿಮ ಸುತ್ತಿನ ಆರ್ಥಿಕ ಪ್ಯಾಕೇಜ್ ಅನ್ನು ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಇದರಲ್ಲಿ ಸಚಿವೆ ಶಿಕ್ಷಣ,ನರೇಗಾ, ಆರೋಗ್ಯ ಸೇರಿದಂತೆ ಏಳು ವಲಯಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೊರೊನಾದಿಂದ ಮಕ್ಕಳ ವಿದ್ಯಾಭ್ಯಾದಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಲು ಆನ್ಲೈನ್ ಶಿಕ್ಷಣ ಆರಂಭಿಸಲು ಮುಂದಾಗಿದ್ದಾರೆ. ಈ ಕುರಿತು ಶಿಕ್ಷಣ ತಜ್ಞರಾದ ಪ್ರೋ. ಕೆ.ಇ. ರಾಧಾಕೃಷ್ಣ ಅವರ ಸಂದರ್ಶನವನ್ನು ಬೆಂಗಳೂರು ಬ್ಯೂರೋ ಚೀಫ್ ಸೋಮಶೇಖರ್ ಅವರು ನಡೆಸಿದ್ದಾರೆ.