ಬಳ್ಳಾರಿಯಲ್ಲಿ ಮೊದಲ ದಿನವೇ ನೂರಾರು ಪರಿಸರ ಸ್ನೇಹಿ ಗಣೇಶ ವಿಸರ್ಜನೆ - ಗಣಿನಾಡು ಬಳ್ಳಾರಿಯಲ್ಲಿ ಮೊದಲನೇ ದಿನವೇ ನೂರಾರು ಮಣ್ಣಿನ ಪರಿಸರ ಸ್ನೇಹಿ ಗಣೇಶನ ವಿಸರ್ಜನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8519558-1078-8519558-1598104616849.jpg)
ಬಳ್ಳಾರಿ: ಬಳ್ಳಾರಿ ನಗರದ ಹೊರವಲಯದ ತಾಳೂರು ರಸ್ತೆಯಲ್ಲಿ ಇರುವ ಕಾಲುವೆಯಲ್ಲಿ ಮೊದಲ ದಿನವೇ ನೂರಾರು ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಸಾರ್ವಜನಿಕರು ನೆರವೇರಿಸಿದರು. ಈ ಸಮಯದಲ್ಲಿ ಕುಟುಂಬದ ಸದಸ್ಯರೊಂದಿಗೆ ಮಕ್ಕಳು ಸಹ ಆಗಮಿಸಿ ಗಣೇಶನಿಗೆ ಪೂಜೆ ಸಲ್ಲಿಸಿ ಮೂರ್ತಿ ವಿಸರ್ಜನೆಯಲ್ಲಿ ಪಾಲ್ಗೊಂಡರು. ವಿಸರ್ಜನೆ ಸಮಯದಲ್ಲಿ ಮನೆಯಲ್ಲಿ ಕೂರಿಸಿದ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳು ಹೆಚ್ಚಾಗಿ ಕಂಡು ಬಂದವು. ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.