ದೆಹಲಿಯಿಂದ ಹುಬ್ಬಳ್ಳಿಗೆ ಬಂದ ಮಗಳು... ತಂದೆಯನ್ನು ಕಂಡು ರೈಲ್ವೆ ನಿಲ್ದಾಣದಲ್ಲಿಯೇ ಕಣ್ಣೀರು

By

Published : May 16, 2020, 4:32 PM IST

thumbnail

ಲಾಕ್​ಡೌನ್ ಸಡಿಲಿಕೆಯ ಭಾಗವಾಗಿ ಶ್ರಮಿಕ್​ ರೈಲಿನ ಮೂಲಕ ದೆಹಲಿಯಿಂದ ಹಲವು ಕಡೆ ಪ್ರಯಾಣಿಕರು ತಮ್ಮ ತಾಯ್ನಾಡಿಗೆ ತಲುಪುತ್ತಿದ್ದಾರೆ. ಈ ಹಿನ್ನೆಲೆ ಐಎಎಸ್​​ ಕೋಚಿಂಗ್​​ಗಾಗಿ ತೆರಳಿದ್ದ ಹುಬ್ಬಳ್ಳಿಯ ಯುವತಿಯೊಬ್ಬರು ಇಂದು ಶ್ರಮಿಕ್​ ರೈಲಿನ ಮೂಲಕ ಆಗಮಿಸಿದ್ದು, ರೈಲು ನಿಲ್ದಾಣದಲ್ಲಿ ತನ್ನ ತಂದೆಯನ್ನು ಕಂಡು ಕಣ್ಣೀರಿಟ್ಟರು. ಮುಂದಿನ 14 ದಿನಗಳ ಕಾಲ ಕ್ವಾರಂಟೈನ್​ಲ್ಲಿ ಇರಬೇಕಾಗಿರುವ ಹಿನ್ನೆಲೆ ದುಃಖದಿಂದ ಯುವತಿ ಕಣ್ಣೀರು ಹಾಕಿದರು. ಈ ವೇಳೆ ಅವರ ತಂದೆ ಮಗಳಿಗೆ ಸಮಾಧಾನ ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.