ವಾಹನ ಸವಾರರಿಂದ ಸಂಚಾರಿ ನಿಯಮ ‌ಉಲ್ಲಂಘನೆ: ಹಾಡಿನ ಮೂಲಕ ಕಾನ್ಸ್​ಟೇಬಲ್​ ಕಿವಿಮಾತು

By

Published : Oct 19, 2020, 5:28 PM IST

thumbnail

ಬೆಂಗಳೂರು: ಬೆಂಗಳೂರಿನ ಸಿಎಆರ್‌ನ ದಕ್ಷಿಣಾ ವಿಭಾಗದ ಶ್ವಾನದಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್‌ಟೇಬಲ್ ಮೌಲಲಿ ಕೆ.ಆಲಗೂರ ಈ ಹಿಂದೆ ಸರಗಳ್ಳತನ ಹಾಗೂ ಡ್ರಗ್ಸ್ ಬಗ್ಗೆ​ ಎಚ್ಚರ ಎಂಬ ಹಾಡನ್ನು ಬರೆದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು. ಮೌಲಲಿ ಇದೀಗ ಸಂಚಾರಿ ನಿಯಮ ಮತ್ತು ದಂಡದ ಬಗ್ಗೆ ಜಾಗೃತಿ ಮೂಡಿಸೂವ ಮತ್ತೊಂದು ಹಾಡನ್ನು ಹಾಡಿದ್ದಾರೆ. ಸದ್ಯ ಮೌಲಲಿ ಅವರ ಈ ಹಾಡಿಗೆ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಹಾಗೂ ನಟ ಶಿವರಾಜ್​ಕುಮಾರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುವುದರಿಂದ ಏನೆಲ್ಲಾ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಮಾಹಿತಿ ಈ ಹಾಡಿನಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.