ಕಪ್ಪತಗುಡ್ಡದ ಮೇಲೆ ಕರಿನೆರಳು ! ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಹಿರೇಮಠ
ಗದಗ: ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ಹೊಂದಿರುವ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಕೆಲವು ರಾಜಕಾರಣಿಗಳು ಮುಂದಾಗಿದ್ದು, ಅವರ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಕಿಡಿಕಾರಿದ್ದಾರೆ. ಕಪ್ಪತಗುಡ್ಡದ ಮೇಲೆ ಮತ್ತೆ ಕರಿನೆರಳು ಬಿದ್ದಿರುವ ಕುರಿತು ಈಟಿವಿ ಭಾರತದ ನಮ್ಮ ಪ್ರತಿನಿಧಿ ಜೊತೆ ಚಿಟ್ ಚಾಟ್ ನಡೆಸಿರುವ ಹಿರೇಮಠ್, ಜಗದೀಶ್ ಶೆಟ್ಟರ್, ಆನಂದ್ ಸಿಂಗ್, ಸಿ.ಸಿ. ಪಾಟೀಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.