ಬಜೆಟ್ಗೆ ಚಾಮರಾಜನಗರದಲ್ಲಿ ಮಿಶ್ರ ಪ್ರತಿಕ್ರಿಯೆ: ರೈತರ 16 ಅಂಶದ ಕಾರ್ಯಕ್ರಮಕ್ಕೆ ಪರ-ವಿರೋಧ!
![ETV Thumbnail thumbnail](https://etvbharatimages.akamaized.net/etvbharat/prod-images/320-214-5921391-thumbnail-3x2-syugdf.jpg)
ಚಾಮರಾಜನಗರ: ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿಯ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2020-21 ರ ಸಾಲಿನ ಆಯವ್ಯಯಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರೈತರಿಗಾಗಿ ರೂಪಿಸಿರುವ 16 ಅಂಶದ ಕಾರ್ಯಕ್ರಮಕ್ಕೂ ಪರ ವಿರೋಧ ವ್ಯಕ್ತವಾಗಿದೆ. ರೈತರ ಜೀವನ ಸುಧಾರಿಸಲು, ಅವರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸದೇ ಈ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು, ತೆರಿಗೆ ವಿಸ್ತರಣೆ, ಜಿಎಸ್ಟಿ ಕಡಿತದ ಬಗ್ಗೆ ಸಂತಸ ವ್ಯಕ್ತವಾಗಿದೆ.