ಬಯಲಿನಲ್ಲೇ ಸ್ನಾನ, ಬಯಲಿನಲ್ಲೇ ಅಡುಗೆ, ಬದುಕು ಕಸಿದುಕೊಂಡ ಮಲಪ್ರಭೆ
ಮಲಪ್ರಭೆಯ ಪ್ರವಾಹಕ್ಕೆ ಸಿಕ್ಕು ಅದೆಷ್ಟು ಕುಟುಂಬಗಳು ಪರಿತಪಿಸುತ್ತಿದ್ದಾವೋ ದೇವರಿಗೆ ಗೊತ್ತು. ಪ್ರವಾಹಕ್ಕೆ ಸಿಕ್ಕು ನಲುಗಿದವರ ಬದುಕು ಈವರೆಗೂ ಸರಿ ಹೋಗಿಲ್ಲ. ಬಯಲಲ್ಲೇ ಸ್ನಾನ ಬಯಲಿನಲ್ಲೇ ಅಡುಗೆ. ಒಮ್ಮೆ ತುತ್ತು ಅನ್ನ ಸಿಕ್ಕರೆ ಇನ್ನೊಂದು ಹೊತ್ತಿಗೆ ಉಪವಾಸ ಮಾಡುತ್ತಿರೋ ನೆರೆ ಸಂತ್ರಸ್ತರ ಕುಟುಂಬದ ಸ್ಥಿತಿ ಯಾರಿಗೂ ಬೇಡ.