thumbnail

By

Published : May 2, 2021, 3:18 PM IST

ETV Bharat / Videos

ಬಿಜೆಪಿಯನ್ನ ಬೆಂಡಾಗಿಸದ ಬಂಡಾಯ.. ಬಸವಕಲ್ಯಾಣಕ್ಕೆ ಮತದಾರರು 'ಶರಣು'!

ಬೀದರ್ : ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ 20,494 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಾಲಾ ಬಿ.ನಾರಾಯಣರಾವ್ ಅವರನ್ನು ಸೋಲಿಸಿ ಕಲ್ಯಾಣ ನಾಡಿನ ಹೊಸ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಸಚಿವರ ದಂಡು ನಡೆಸಿದ ಕಾರ್ಯಾಚರಣೆ ಕೊನೆಗೂ ಫಲ ನೀಡಿದ್ದು, ಬಿಜೆಪಿಗೆ ಸಕ್ಕರೆ ತಿಂದಷ್ಟು ಖುಷಿಯಾದ್ರೆ, ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಮಲ್ಲಿಕಾರ್ಜುನ್ ಖೂಬಾ, ಜೆಡಿಎಸ್ ಅಭ್ಯರ್ಥಿ ಯಾಸ್ರಬ್ ಖಾದ್ರಿ ಲೆಕ್ಕಕ್ಕಿಲ್ಲದಂತೆ ಕಣದಿಂದ ಹೊರ ಆಗಿದ್ದಾರೆ. ಮತ ಎಣಿಕೆಯ ಫಲಿತಾಂಶ ಕುರಿತು ಈಟಿವಿ ಭಾರತ್ ವರದಿಗಾರ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.