ವಿಜಯಪುರ: ಆಳವಾದ ಕಲ್ಲಿನ ಖಣಿಯಲ್ಲಿ ಬಿದ್ದಿದ್ದ ಆಕಳು ರಕ್ಷಣೆ
ವಿಜಯಪುರ: ನಿನ್ನೆ ಆಹಾರವನ್ನರಸಿ ಬಂದು ಆಳವಾದ ಕಲ್ಲಿನ ಖಣಿಯಲ್ಲಿ ಬಿದ್ದಿದ್ದ ಆಕಳೊಂದನ್ನು ಇಂದು ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಜೆ. ಎಂ. ಅತ್ತಾರ ಎಂಬುವವರಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಇದು ಅವರ 6ನೇ ಕಾರ್ಯಾಚರಣೆಯಾಗಿದೆ. ನಂತರ ಹಸುವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷರಾಗಿರುವ ಕಗ್ಗೋಡ ಗೋಶಾಲೆಗೆ ರವಾನಿಸಲಾಯಿತು.
Last Updated : Oct 23, 2020, 1:55 PM IST