ಪತಿಯಿಂದ ಸಾಹಿತ್ಯ ಪತ್ನಿಯಿಂದ ಹಾಡು: ಸಖತ್ ಸದ್ದು ಮಾಡುತ್ತಿದೆ ಕೊರೊನಾ ಜಾಗೃತ ಗೀತೆ
![ETV Thumbnail thumbnail](https://etvbharatimages.akamaized.net/etvbharat/prod-images/320-214-11653377-thumbnail-3x2-nin.jpg)
ಬಾಗಲಕೋಟೆ: ಬಿಎಂಟಿಸಿ ಕಂಡಕ್ಟರ್ ಒಬ್ಬರು ಕೊರೊನಾ ಜಾಗೃತಿ ಮೂಡಿಸುವ ಸಾಹಿತ್ಯ ರಚನೆ ಮಾಡಿ, ತಮ್ಮ ಪತ್ನಿಯಿಂದಲೇ ಹಾಡಿಸಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನಿವಾಸಿ ಆಗಿರುವ ಮನೋಹರ ಶಿವಪುತ್ರಪ್ಪ ಕಂಪೂರ ಎಂಬುವರು ಸಾಹಿತ್ಯ ರಚನೆ ಮಾಡಿದ್ದಾರೆ. ಈಗ ಈ ಹಾಡು ಪ್ರಚಲಿತವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಗಮನ ಸೆಳೆಯುತ್ತಿದೆ.