ಡಾ.ವೀರೇಂದ್ರ ಹೆಗ್ಗಡೆ ಅವರ 71ನೇ ಜನ್ಮದಿನಾಚರಣೆ: ಧಾರವಾಡದಲ್ಲಿ ಚಾರಿಟಿ ವಾಕ್​

By

Published : Nov 24, 2019, 12:56 PM IST

thumbnail
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ 71ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಧಾರವಾಡದಲ್ಲಿ ಎಸ್​ಡಿಎಂ ಮೆಡಿಕಲ್​ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಯೋಗದಲ್ಲಿ ಚಾರಿಟಿ​ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಭೂಮಿ ಉಳಿಸಿ, ನಿಸರ್ಗ ಬೆಳೆಸಿ ಎನ್ನುವ ಅಭಿಯಾನದ ಈ ನಡಿಗೆಗೆ ಕಲಾಭವನದಲ್ಲಿ ಗಿಡ ನೆಡುವ ಮೂಲಕ ಎಸ್​ಡಿಎಂ ಮೆಡಿಕಲ್​ ಕಾಲೇಜಿನ ಎಂ.ಡಿ. ನಿರಂಜನ್​ಕುಮಾರ್ ಚಾಲನೆ ನೀಡಿದರು. ಚಾರಿಟಿ ವಾಕ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ತಮ್ಮ ನಡಿಗೆಯಿಂದ ಬಂದಂತಹ ಹಣವನ್ನು ಬಡ ರೋಗಿಗಳಿಗೆ ನೀಡಲು ಮುಂದಾಗಿದ್ದಾರೆ. ಕಲಾಭವನದಿಂದ ಪ್ರಾರಂಭವಾದ ನಡಿಗೆ ಪ್ರಮುಖ ‌ಬೀದಿಗಳಲ್ಲಿ ಸಂಚರಿಸಿ ಸತ್ತೂರಿನ ಎಸ್​ಡಿಎಂ ಕಾಲೇಜಿನವರೆಗೂ ಸುಮಾರು 5 ಕಿ.ಮೀ​ ನಡೆಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.