ಧಾರವಾಡ: ಶತಾಯುಷಿ ಮತದಾರರಿಗೆ ಜಿಲ್ಲಾಧಿಕಾರಿಯಿಂದ ಸನ್ಮಾನ- ವಿಡಿಯೋ
Published : Oct 1, 2023, 6:01 PM IST
ಧಾರವಾಡ : ಹಿರಿಯ ನಾಗರಿಕರ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲಾಡಳಿತದಿಂದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಗುರುದತ್ತ ಹೆಗಡೆ ಅವರು ನೂರು ವರ್ಷ ದಾಟಿದ ಹಿರಿಯ ಮತದಾರರ ಮನೆಗೆ ತೆರಳಿ, ಅಭಿನಂದನಾ ಪತ್ರ, ಶಾಲು, ಹಾರ ಮತ್ತು ಫಲ-ಪುಷ್ಪ ನೀಡಿ, ಗೌರವಿಸಿದರು.
ಬೆಳಗ್ಗೆ ಸಪ್ತಾಪುರ ನಿವಾಸಿ ರಾಜಾಬಾಯಿ ಕೃಷ್ಣರಾವ್ ಚಿಕ್ಕೆರೂರ (103) ಮತ್ತು ಕಲ್ಯಾಣನಗರದ ನಿವಾಸಿ ಶಾಂತಾಬಾಯಿ ಛಬ್ಬಿ (101) ಅವರನ್ನು ಗುರುದತ್ತ ಹೆಗಡೆ ಸನ್ಮಾನಿಸಿ ಗೌರವಿಸಿದರು. ಸಾಧನಕೇರಿ ನಿವಾಸಿ ಕುಸುಮಾ ಕೀರ್ಲೊಸ್ಕರ್, ಕಿಲ್ಲಾ ನಿವಾಸಿ ರಾಮಸ್ವಾಮಿ ಕೆ.ಪಿ. ಸಾರಸ್ವತಪುರದ ಗಿರಿಜಾಬಾಯಿ ನರಗುಂದ ಮತ್ತು ತಂಗವ್ವ ಕರಿಕಟ್ಟಿ ಎಂಬವರ ಮನೆಗಳಿಗೂ ತೆರಳಿ, ಅಧಿಕಾರಿಗಳು ಗೌರವಿಸಿದರು.
ಹಿರಿಯ ನಾಗರಿಕರ ಯೋಗಕ್ಷೇಮ ವಿಚಾರಿಸಿದ ಅವರು, ಅಗತ್ಯ ಸೌಲಭ್ಯ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಯುವ ಮತದಾರರಿಗೆ ಹಿರಿಯ ನಾಗರಿಕರು ಮಾದರಿ ಎಂದರು. ಸಹಾಯಕ ಮತದಾರ ನೋಂದಣಿ ಅಧಿಕಾರಿ ಉನೇಶ ಸವಣೂರ, ಮಹಾನಗರ ಪಾಲಿಕೆ ವಲಯ ಕಚೇರಿ 12 ರ ಶಂಕರ ಪಾಟೀಲ, ಸಮುದಾಯ ಸಂಘಟನಾ ಅಧಿಕಾರಿ ವಿದ್ಯಾವತಿ ತೆಲಗಾರ, ವಿಜಯಲಕ್ಷ್ಮಿ ಸೇರಿದಂತೆ ಸನ್ಮಾನಿತರ ಕುಟುಂಬಸ್ಥರು ಇದ್ದರು.
ಇದನ್ನೂ ಓದಿ: ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ