ಜೀವಜಲಕ್ಕಾಗಿ ನಡೆಯಬೇಕು 2 ಕಿಮೀ ದೂರ: ವಿಡಿಯೋ ನೋಡಿ

By

Published : May 3, 2023, 11:02 AM IST

thumbnail

ನಾಸಿಕ್​(ಮಹಾರಾಷ್ಟ್ರ): ಬೇಸಿಗೆ ಏರುತ್ತಿದೆ. ದೇಶದ ಅಲ್ಲಲ್ಲಿ ನೀರಿನ ಬವಣೆಯೂ ಶುರುವಾಗಿದೆ. ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯ ಬೋರ್ಧಪದ ಗ್ರಾಮಸ್ಥರು ಜೀವಜಲಕ್ಕಾಗಿ ನಿತ್ಯವೂ ಪರದಾಡುತ್ತಿದ್ದಾರೆ. ಗ್ರಾಮಕ್ಕೆ ಯಾವುದೇ ನೀರಿನ ಸಂಪರ್ಕ ಇಲ್ಲ. ಇದ್ದ ಬಾವಿಯೂ ಬತ್ತಿ ಹೋಗಿದೆ. ಇದರಿಂದ ನೀರಿನ ಹಾಹಾಕಾರ ಉಂಟಾಗಿದೆ.

ಬುಡಕಟ್ಟು ಜನಾಂಗದವರು ವಾಸವಿರುವ ಈ ಗ್ರಾಮಕ್ಕೆ ಕೇಂದ್ರ ಸರ್ಕಾರದ ಜಲಜೀವನ್​ ಯೋಜನೆ ಮಂಜೂರಾಗಿದೆ. ಆದರೆ, ಈವರೆಗೂ ಅದು ಆರಂಭವಾಗಿಲ್ಲ. ಊರಿನಿಂದ 2 ಕಿ.ಮೀ ದೂರದ ಬೆಟ್ಟದಲ್ಲಿರುವ ಬಾವಿಯೇ ಮೂಲಾಧಾರವಾಗಿದೆ. ಮಕ್ಕಳು, ಮಹಿಳೆಯರು ಕಾಡಿನಲ್ಲಿ ನಡೆದುಕೊಂಡು ಬಂದೇ ನೀರು ಕೊಂಡೊಯ್ಯಬೇಕಾಗಿದೆ. ಈ ಮಧ್ಯೆ ಕಾಡಿನಲ್ಲಿ ಒಂಟಿಯಾಗಿ ಓಡಾಡಲು ಪ್ರಾಣಿಗಳ ಭಯವಿದೆ. ಇಷ್ಟು ದೂರ ಸಾಗಿ ನೀರು ತರುವುದು ತ್ರಾಸದಾಯಕ ಎಂಬುದು ಅಲ್ಲಿನ ಮಹಿಳೆಯರ ಅಳಲು.

ನೀರಿನ ಬಿಂದಿಗೆ ಸಮೇತ ಗುಡ್ಡ ಹತ್ತಿ ಇಳಿಯುವಾಗ ಮಹಿಳೆಯರು, ಮಕ್ಕಳು ಗಾಯಗೊಂಡ ಉದಾಹರಣೆಗಳಿವೆ. ಹೀಗಾಗಿ ಗ್ರಾಮಕ್ಕೆ ಮಂಜೂರಾಗಿರುವ ಜಲಜೀವನ್​ ಯೋಜನೆಯನ್ನು ಶೀಘ್ರವೇ ಆರಂಭಿಸಬೇಕು ಎಂದು ಅಲ್ಲಿನ ಜನರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಯೋಜನೆ ಆರಂಭವಾಗಿದೆ, ಗ್ರಾಮಕ್ಕೆ ನೀರು ಒದಗಿಸಲಾಗುವುದು ಎಂದು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: 'ನೀವೂ ಪ್ರಧಾನಿಯಾಗಿ..' ಮಕ್ಕಳೊಂದಿಗೆ ಮೋದಿ ಅಕ್ಕರೆಯ ಮಾತುಕತೆ- ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.