thumbnail

By

Published : Jun 21, 2023, 9:20 PM IST

ETV Bharat / Videos

ಗ್ರಾಮ ಪಂಚಾಯತಿ ಕೇಂದ್ರಸ್ಥಾನಕ್ಕೆ ಆಗ್ರಹ; ಎತ್ತಿನಬಂಡಿಗಳ ಸಮೇತ ಅಹೋರಾತ್ರಿ ಧರಣಿ

ಗದಗ : ಗ್ರಾಮ ಪಂಚಾಯತಿ ಕೇಂದ್ರಸ್ಥಾನ ಬೇಕು ಎಂದು ಜಗಳೂರು ಗ್ರಾಮಸ್ಥರು ಜಿಲ್ಲೆಯ ರೋಣ ಪಟ್ಟಣದ ತಹಶೀಲ್ದಾರ್​ ಕಚೇರಿ ಎದುರು ಎತ್ತಿನಬಂಡಿ ಸಮೇತ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮಂಗಳವಾರ ಆರಂಭಗೊಂಡ ಧರಣಿ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾಕಾರರು ಅಧಿಕಾರಿಗಳ ಮನವೊಲಿಕೆಗೆ ಜಗ್ಗುತ್ತಿಲ್ಲ. ತಹಶೀಲ್ದಾರ್​ ಕಚೇರಿ ಎತ್ತಿನಬಂಡಿಗಳಿಂದ ಭರ್ತಿಯಾಗಿದೆ. 

ಜಗಳೂರು ಗ್ರಾಮಕ್ಕೆ ಗ್ರಾಮ ಪಂಚಾಯತ್​ ಕೇಂದ್ರಸ್ಥಾನ ಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. "ರೋಣ ಪಟ್ಟಣದಿಂದ ಕೇವಲ 6 ಕಿ.ಮೀ ಇದ್ದರೂ ಜನಸಂಖ್ಯೆಯಲ್ಲಿ ಹೊಸಳ್ಳಿ ಗ್ರಾಮಕ್ಕಿಂತ ನಮ್ಮೂರಿನ (ಜಗಳೂರು) ಜನಸಂಖ್ಯೆಯೇ ಹೆಚ್ಚಿದೆ. ಹೊಸಳ್ಳಿ ನಮ್ಮೂರಿಗಿಂತ ಚಿಕ್ಕದಿದ್ದರೂ ಅಲ್ಲಿ ಪಂಚಾಯತಿ ಕೇಂದ್ರ ಸ್ಥಾಪನೆ ಮಾಡಿ ನಮಗೆ ಅನ್ಯಾಯ ಮಾಡಿದ್ದಾರೆ. ನಮಗೆ ಗ್ರಾಮ ಪಂಚಾಯತಿ ಕೇಂದ್ರಸ್ಥಾನ ಬೇಕು ಅಂತ ಹಲವು ಬಾರಿ ಮನವಿ ಕೊಡಲಾಗಿತ್ತು. ಈ ಹಿಂದೆ ಹಲವು ಚುನಾವಣೆಗಳನ್ನು ಬಹಿಷ್ಕಾರ ಮಾಡುವುದಕ್ಕೂ ಪ್ರಯತ್ನ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸುಳ್ಳು ಭರವಸೆಗಳು ನಮ್ಮನ್ನು ಕೈಕಟ್ಟಿ ಕೂರುವಂತೆ ಮಾಡಿದವು. ಈಗ ಆ ಎಲ್ಲ ಭರವಸೆಗಳನ್ನು ನಂಬದೆ ಕೇಂದ್ರಸ್ಥಾನ ಪಡೆದೇ ಊರಿಗೆ ಹೋಗೋದು" ಎಂದು ಜನರು ಟೆಂಟ್ ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ:  Viral video: ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪವಾಡ ಸದೃಶ್ಯ ರೀತಿ ಮಹಿಳೆ ಪಾರು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.