ದೇವನಹಳ್ಳಿಯಲ್ಲಿ ಆರ್ಟಿಒ ಅಧಿಕಾರಿಗಳ ಕಾರ್ಯಾಚರಣೆ: ಟ್ಯಾಕ್ಸ್ ಕಟ್ಟದೇ ಸಂಚರಿಸುತ್ತಿದ್ದ ವಾಹನಗಳಿಗೆ ದಂಡದ ಬಿಸಿ - ಬಸ್ಗಳ ತಡೆದು ಪರಿಶೀಲನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/17-10-2023/640-480-19786056-thumbnail-16x9-bgk.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 17, 2023, 12:12 PM IST
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಇಂದು ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಆರ್ಟಿಒ ಅಧಿಕಾರಿಗಳು, ತೆರಿಗೆ ಶುಲ್ಕ ಪಾವತಿಸದೇ ಹೆಚ್ಚುವರಿ ಪ್ಯಾಸೆಂಜರ್ ಮತ್ತು ಗೂಡ್ಸ್ಗಳನ್ನು ಸಾಗಿಸುತ್ತಿದ್ದ ಬಸ್ಗಳಿಗೆ ಶಾಕ್ ನೀಡಿದ್ದಾರೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟೋಲ್ ಬಳಿ ಕಾರ್ಯಚರಣೆಗೆ ಇಳಿದ ಅಧಿಕಾರಿಗಳು ಟ್ಯಾಕ್ಸ್ ಕಟ್ಟದೆ ಓಡಾಡುತ್ತಿದ್ದ ಬಸ್ಗಳ ಮಾಲೀಕರಿಗೆ ಬಿಸಿ ಮುಟ್ಟಿಸಿದರು.
ರಾಜ್ಯ ಮತ್ತು ಅಂತಾರಾಜ್ಯದಲ್ಲಿ ಸಂಚಾರಿಸುವ ಬಸ್ಗಳನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಟ್ಯಾಕ್ಸ್ ಕಟ್ಟದೇ ಹೆಚ್ಚುವರಿ ಪ್ರಯಾಣಿಕರು ಮತ್ತು ಸರಕುಗಳನ್ನು ತುಂಬಿಕೊಂಡು ಸಂಚಾರಿಸುತ್ತಿರುವುದು ಕಂಡು ಬಂದಿದೆ. ಸಂಚಾರ ನಿಮಯ ಉಲ್ಲಂಘಿಸಿರುವ ಖಾಸಗಿ ಬಸ್ಗಳಿಗೆ ಅಧಿಕಾರಿಗಳು ದಂಡ ಹಾಕಿದ್ದಾರೆ. ದೇವನಹಳ್ಳಿ ಆರ್ಟಿಒ ಶ್ರೀನಿವಾಸ್, ಸೀನಿಯರ್ ಬ್ರೇಕ್ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ಹಾಗೂ ನಾಗರಾಜ್ ನೇತೃತ್ವದ ತಂಡವು ಕಾರ್ಯಚರಣೆಯಲ್ಲಿ ತೊಡಗಿದ್ದರು.
ಇದನ್ನೂ ಓದಿ: ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಜಮೀನು ಮಂಜೂರು : ಕಟ್ಟಡ ನಿರ್ಮಿಸದ ಹಿನ್ನೆಲೆ ಭೂಮಿ ಹಿಂಪಡೆದ ಕ್ರಮ ಎತ್ತಿಹಿಡಿದ ಹೈಕೋರ್ಟ್
ವಿಮಾನದ ಶೌಚಾಲಯದ ವಾಶ್ ಬೇಸಿನ್ನಲ್ಲಿ 1.8 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ..