thumbnail

By

Published : Jun 12, 2023, 3:00 PM IST

ETV Bharat / Videos

ಜೀವ ಪಣಕ್ಕಿಟ್ಟು ನೂರಾರು ಜನರ ಸಂಚಾರ.. ಕಿಕ್ಕಿರಿದು ತುಂಬಿದ ಬಸ್​ನಲ್ಲಿ ಶಾಲಾ ಮಕ್ಕಳ ಪ್ರಯಾಣ..

ಕಲಬುರಗಿ: ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ತೆರಳಬೇಕು ಎಂಬ ಒತ್ತಡದಲ್ಲಿರುತ್ತಾರೆ. ಆದರೆ ಚಿಂಚೋಳಿಯಿಂದ ಕಲಬುರಗಿ ಮಾರ್ಗಕ್ಕೆ ಬೆಳಗ್ಗೆ ಬಸ್ ಸಮಸ್ಯೆ ಬಹು ದೊಡ್ಡ‌ ಅನಾನುಕೂಲ ಆಗಿದೆ. ಇದರಿಂದ ಒಂದೇ ಬಸ್​ನಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ.  

ಇನ್ನು ಶಾಲಾ ಮಕ್ಕಳು ಕಿಕ್ಕಿರಿದು ತುಂಬಿದ ಬಸ್​ನಲ್ಲೇ ಪ್ರಯಾಣಿಸುತ್ತಿದ್ದು, ಬಸ್​ ಹತ್ತುವ ಬಾಗಿಲಿನಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಪ್ರಯಾಣಿಸುವ ಸ್ಥಿತಿ ಬಂದೋದಗಿದೆ. ಶಾಲಾ ಮಕ್ಕಳಾಗಲಿ ಮತ್ತು ಪ್ರಯಾಣಿಕರಾಗಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ‌ ಕೆಲಸಕ್ಕೆ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಚಿಂಚೋಳಿ ಸಾರಿಗೆ ಘಟಕದ ಅಧಿಕಾರಿಗಳು ಬಸ್​ಗಳ ನಿರ್ವಹಣೆ ಮಾಡುವಲ್ಲಿ‌ ವಿಫಲವಾಗುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಚಿಂಚೋಳಿಯಿಂದ ಕಲಬುರಗಿ ಗೆ ಬೆಳಗ್ಗೆ 7 ಗಂಟೆಗೆ ಬಸ್ ಬಿಟ್ಟರೆ ನಂತರ 9:30ರ ವರೆಗೆ ಒಂದು ಬಸ್ ಬಿಡುವುದಿಲ್ಲವಂತೆ. 9:30ರ‌ನಂತರ ಒಂದೇ ಬಾರಿ 2 ಬಸ್ ಬಿಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಬಹಳಷ್ಟು ತೊಂದರೆ ಆಗುತ್ತಿದೆಯಂತೆ. ಹೀಗಾಗಿ ಕಲಬುರಗಿ ನಗರಕ್ಕೆ ಉದ್ಯೋಗಕ್ಕೆ ಹಾಗೂ ಆಸ್ಪತ್ರೆಗೆ ಹೋಗುವವರು‌ ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. 

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಪ್ರತಿ 30 ನಿಮಿಷಕ್ಕೆ ಒಂದು ಬಸ್ ಚಿಂಚೋಳಿಯಿಂದ ಕಲಬುರಗಿಗೆ ಓಡಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಓದಿ: Congress Guarantee Scheme: ಮಹಿಳೆಯರಿಗೆ ಬಹುನಿರೀಕ್ಷಿತ ಉಚಿತ ಬಸ್​ ಪ್ರಯಾಣ .. ಇಲ್ಲಿದೆ ಶಕ್ತಿ ಯೋಜನೆಯ ಸಮಗ್ರ ಚಿತ್ರಣ 

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.