ಶಿವಮೊಗ್ಗದ ವಿವಿಧೆಡೆ ಶಂಕಿತ ಉಗ್ರ ಶಾರಿಕ್ ಕರೆದೊಯ್ದು ಸ್ಥಳ ಮಹಜರು ನಡೆಸಿದ ಎನ್ಐಎ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17935968-thumbnail-4x3-vny.jpg)
ಶಿವಮೊಗ್ಗ: ಮಂಗಳೂರಿನ ಕಂಕನಾಡಿ ಬಳಿಯ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಶಾರಿಕ್ನನ್ನು ರಾಷ್ಟ್ರೀಯ ತನಿಖಾ ದಳ ಜಿಲ್ಲೆಗೆ ಕರೆತಂದು ವಿವಿಧಡೆ ಸ್ಥಳ ಮಹಜರು ನಡೆಸಿದೆ. ಮಂಗಳವಾರ ಸಂಜೆ ಶಾರಿಕ್ನನ್ನು ಶಿವಮೊಗ್ಗಕ್ಕೆ ಕರೆತಂದ ಎನ್ಐಎ ತಂಡ ಶಿವಮೊಗ್ಗ ನಗರದ ವಿವಿಧೆಡೆ ಸ್ಥಳ ಪರಿಶೀಲನೆ ಮಾಡಿ, ಮಹಜರು ನಡೆಸಿದೆ.
ಇಂದು ಬೆಳಗ್ಗೆ ನಗರದ ಡಬಲ್ ರಸ್ತೆ, ಗಾಂಧಿ ಬಜಾರ್ ಸೇರಿದಂತೆ ಅನೇಕ ಕಡೆಗಳಲ್ಲಿ ಮಹಜರು ನಡೆಸಿದೆ. ಶಿವಮೊಗ್ಗ ನಗರದಲ್ಲಿ ಮಹಜರು ಮುಗಿಸಿದ ನಂತರ ಎನ್ಐಎ ತಂಡ ಶಾರೀಕ್ನನ್ನು ತೀರ್ಥಹಳ್ಳಿಗೆ ಕರದೊಯ್ದಿದ್ದಾರೆ. ಅಲ್ಲಿ ಮನೆ ಸೇರಿದಂತೆ ಆತ ನೀಡಿದ ಮಾಹಿತಿ ಮೇರೆಗೆ ಮಹಜರು ನಡೆಸಲಿದ್ದಾರೆ. ಸ್ಫೋಟದ ಸಂದರ್ಭದಲ್ಲಿ ಶೇ 25 ರಷ್ಟು ಸುಟ್ಟ ಗಾಯಗಳಿಂದ ಪಾರಾಗಿದ್ದ ಶಾರಿಕ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ ಹಿನ್ನೆಲೆ ಎನ್ಐಎ ತಂಡವು ಶಂಕಿತ ಶಾರಿಕ್ನನ್ನು ಕರೆತಂದು ಸ್ಥಳ ಮಹಜರು ಮಾಡುತ್ತಿದೆ.
ಇದನ್ನೂ ಓದಿ: ಮಂಗಳೂರು ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಭಾಗಶಃ ಗುಣಮುಖ; ಶೀಘ್ರದಲ್ಲೇ ಎನ್ಐಎ ವಶಕ್ಕೆ