thumbnail

By

Published : Jun 14, 2023, 9:40 PM IST

ETV Bharat / Videos

ಬ್ರೇಕ್ ಬದಲು ಕ್ಲಚ್ ಅದುಮಿದ ಚಾಲಕ: ಕಾಲೇಜು ಕಾಂಪೌಂಡ್ ಒಡೆದು ನುಗ್ಗಿದ ಕಾರು- ವಿಡಿಯೋ

ಮಂಗಳೂರು: ಬ್ರೇಕ್ ಬದಲು ಕ್ಲಚ್ ಅದುಮಿ ಚಾಲಕನೊಬ್ಬ ಮಾಡಿದ ಎಡವಟ್ಟಿನಿಂದ ಕಾರೊಂದು ಕಾಲೇಜು ತಡೆಗೋಡೆಯನ್ನೇ ಒಡೆದು ಕಾಂಪೌಂಡ್​ನೊಳಗೆ ನುಗ್ಗಿದ ಘಟನೆ ನಗರದ ಮಣ್ಣಗುಡ್ಡೆಯಲ್ಲಿ ನಡೆದಿದೆ.

ನಗರದ ಮಣ್ಣಗುಡ್ಡೆಯ ಗೋಕರ್ಣನಾಥ ಕಾಲೇಜು ಕಂಪೌಂಡ್ ಒಡೆದು ಈ ಕಾರು ಒಳನುಗ್ಗಿದೆ. ದಂಪತಿ ಕಾರಿನಲ್ಲಿದ್ದರು. ಚಾಲಕ ಪತಿ ಬ್ರೇಕ್ ಬದಲು ಕ್ಲಚ್ ಅದುಮಿದ್ದಾರೆ. ಪರಿಣಾಮ ಕಾರು ವೇಗವಾಗಿ ರಸ್ತೆ ಬಿಟ್ಟು ಸಂಚರಿಸಿ ಕಾಲೇಜು ಕಾಂಪೌಂಡ್ ಒಡೆದು ನುಗ್ಗಿ ಬಿಟ್ಟಿದೆ. ಈ ವೇಳೆ ಕಾರು ಕಾಂಪೌಂಡ್​ನೊಳಗೆ ಸಿಲುಕಿದೆ. ಘಟನೆಯಿಂದ ಕಾರಿನಲ್ಲಿದ್ದವರು ಕಂಗಾಲಾಗಿದ್ದರು. ಕ್ರೇನ್ ಮೂಲಕವೇ ಕಾರನ್ನು ಅಲ್ಲಿಂದ ತೆರವುಗೊಳಿಸಲಾಯಿತು.

ಸ್ಕೂಟರ್ - ಲಾರಿ ನಡುವೆ ಅಪಘಾತ- ಸಾಫ್ಟ್‌ವೇರ್ ಉದ್ಯೋಗಿ ಸಾವು: ಮಂಗಳೂರಿನ ಪಂಪ್‌ವೆಲ್ ಬಳಿ ಟಿಪ್ಪ‌ರ್ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಗಾಯಾಳು ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇಚ್ಚಂಪಾಡಿ ಇಲ್ಲುಂಗಲ್ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ಸಂದೇಶ್ (25) ಸಾವನ್ನಪ್ಪಿದ ಯುವಕ.

ಸಂದೇಶ್‌ ಮಂಗಳೂರಿನಲ್ಲಿ ಸಾಫ್ಟ್​ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಇವರು ರಾತ್ರಿ ಪಾಳಿ ಕೆಲಸ ಮುಗಿಸಿ ತಮ್ಮ ಸ್ಕೂಟಿಯಲ್ಲಿ ಮನೆಗೆ ತೆರಳುವ ವೇಳೆ ಪಂಪ್​ವೆಲ್​ನಲ್ಲಿ ಇಂದು ಬೆಳ್ಳಂಬೆಳಗ್ಗೆ 4 ಗಂಟೆಯ ವೇಳೆಗೆ ಈ ಅಪಘಾತ ನಡೆದಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಂದೇಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ತುಮಕೂರು: ಲಾರಿ–ಕಾರು ನಡುವೆ ಡಿಕ್ಕಿ.. ಇಬ್ಬರು ಸಾವು, ಐವರಿಗೆ ಗಂಭೀರ ಗಾಯ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.