thumbnail

ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಬಾಗಲಕೋಟೆ‌ ಯುವತಿ; ಧೈರ್ಯ ತುಂಬಿದ ಅಧಿಕಾರಿಗಳು

By ETV Bharat Karnataka Team

Published : Oct 11, 2023, 8:09 PM IST

ಬಾಗಲಕೋಟೆ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಜಿಲ್ಲೆಯ ರಬಕವಿ ಪಟ್ಟಣದ ಪೂಜಾ ಎಂಬ ಯುವತಿ ಸಿಲುಕಿರುವ ಕುರಿತು ವರದಿಯಾಗಿದ್ದು ಆತಂಕದಲ್ಲಿದ್ದ ತಂದೆ-ತಾಯಿಗೆ ಪಟ್ಟಣದ ಅಧಿಕಾರಿಗಳು ಧೈರ್ಯ ತುಂಬಿದರು. ರಬಕವಿಯ ಸಂಗಪ್ಪ ಉಮದಿ ಅವರ ಪುತ್ರಿ ಪೂಜಾ ಕಳೆದ ಎರಡು ವರ್ಷಗಳ ಹಿಂದೆ ಟಿಸಿಎಸ್ ಕಂಪನಿ ಮೂಲಕ ಇಸ್ರೇಲ್‌ನಲ್ಲಿಯೇ ವಾಸವಾಗಿದ್ದಾರೆ. ಸದ್ಯ ಅಲ್ಲಿನ ಪರಿಸ್ಥಿತಿ ಗೊತ್ತಾಗುತ್ತಿದ್ದಂತೆ ಪೂಜಾರ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಈ ವಿಚಾರ ತಿಳಿದು ಜಮಖಂಡಿಯ ಎಸಿ ಸಂತೋಷ ಕಾಮಗೊಂಡ, ತಹಶಿಲ್ದಾರ್​​ ಗಿರೀಶ್ ಹಾಗೂ ಡಿಎಸ್ಪಿ ಪಿ.ಶಾಂತವೀರ ಸೇರಿ ಸಂಗಪ್ಪ ಅವರ ಮನೆಗೆ ತೆರಳಿ ಧೈರ್ಯ ಹೇಳಿದ್ದಾರೆ.

ಅಧಿಕಾರಿಗಳ ಸಮ್ಮುಖದಲ್ಲೇ ಪೂಜಾ ತನ್ನ ತಂದೆ-ತಾಯಿ ಜೊತೆಗೆ ಮಾತನಾಡಿದ್ದು ಸದ್ಯಕ್ಕೆ ಇಲ್ಲಿ ಯಾವುದೇ ತೊಂದರೆ ಇಲ್ಲ, ತಾನು ಯುದ್ಧ ಪ್ರದೇಶದಿಂದ 300 ಕಿಮೀ ದೂರದಲ್ಲಿರುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳ ಭೇಟಿಯಿಂದಾಗಿ ನಮಗೆ ಸಮಾಧಾನವಾಗಿದೆ. ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ ಸಹ ಮಾತಾಡಿದ್ದಾರೆ. ನಮ್ಮ ಮಗಳು ಕೂಡ ಚೆನ್ನಾಗಿರುವುದಾಗಿ ಫೋನ್​ ಮೂಲಕ ಮಾಹಿತಿ ನೀಡಿದ್ದಾಳೆ. ಅಲ್ಲಿನ ಸರ್ಕಾರ ಕೂಡ ಎಲ್ಲ ರೀತಿಯಲ್ಲಿ ಮಾಹಿತಿ ನೀಡುತ್ತಿದ್ದು, ಮುನ್ನೆಚ್ಚರಿಕೆಯಿಂದ ಇರುವಂತೆ ಹಾಗೂ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪುತ್ರಿ ಪೂಜಾ ತಮಗೆ ಮಾಹಿತಿ ನೀಡಿರುವುದಾಗಿ ಆಕೆಯ ಪಾಲಕರು ತಿಳಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್​ನಲ್ಲಿ ಸಿಲುಕಿರುವ ಉತ್ತರಕನ್ನಡದ ಹೋಂ​ ನರ್ಸ್​: ಬಂಕರ್​ನಲ್ಲಿರುವುದಾಗಿ ಪತಿಗೆ ಮಾಹಿತಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.