thumbnail

By

Published : May 3, 2023, 8:53 AM IST

ETV Bharat / Videos

ಚಿಂತಾಮಣಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಮತಬೇಟೆ- ವಿಡಿಯೋ

ಚಿಂತಾಮಣಿ (ಚಿಕ್ಕಬಳ್ಳಾಪುರ): ಸ್ಯಾಂಡಲ್​ವುಡ್​ ನಟ ದರ್ಶನ್ ಅವರು​ ಚಿಂತಾಮಣಿ ತಾಲೂಕಿಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಜಿ.ಎನ್.ವೇಣುಗೋಪಾಲ್ ಅಲಿಯಾಸ್ ಗೋಪಿ ಪರ ಮಂಗಳವಾರ ಅವರು ಬಿರುಸಿನ ಪ್ರಚಾರ ನಡೆಸಿದರು. ಚಿಂತಾಮಣಿ ಅಭಿವೃದ್ಧಿಗೆ ವೇಣುಗೋಪಾಲ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ನೆಚ್ಚಿನ ನಟನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ದಾರಿಯುದ್ದಕ್ಕೂ ದರ್ಶನ್​ಗೆ ಜೈಕಾರ ಕೂಗಿದರು.

ನಗರದ ಕೆಎಸ್​​ಆರ್​ಟಿಸಿ ಡಿಪೋ ಮುಂಭಾಗದಿಂದ ಆರಂಭವಾದ ​ರೋಡ್ ಶೋ ಬೆಂಗಳೂರು ವೃತ್ತ, ಮಾರುತಿ ಸ್ಟುಡಿಯೋ ವೃತ್ತ, ಗಜಾನನ ವೃತ್ತ, ಚೇಳೂರು ವೃತ್ತದಿಂದ ತೆರಳಿ ಬೆಂಗಳೂರು ವೃತ್ತ ತಲುಪಿತು. ಅಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದರ್ಶನ್​, "ಗೋಪಿ ಅವರನ್ನು ಗೆಲ್ಲಿಸಿ ಚಿಂತಾಮಣಿ ಅಭಿವೃದ್ಧಿಪಡಿಸಿ" ಎಂದು ಕರೆ ನೀಡಿದರು.

ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ ಮಾತನಾಡಿ, "ಬಿಜೆಪಿ ಯುವಕರ ಪಕ್ಷ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದು, ರಾಷ್ಟ್ರದ ಜನತೆಗೆ ಒಳ್ಳೆಯ ಯೋಜನೆಗಳನ್ನು ನೀಡಿದೆ. ದೇಶದ ಅಭಿವೃದ್ಧಿಗೆ ಹೆಚ್ಚು ಶ್ರಮಪಡುತ್ತಿರುವುದು ಬಿಜೆಪಿ" ಎಂದರು.  

ಇದನ್ನೂ ಓದಿ: ಸ್ನೇಹಿತ ಹಾಗೂ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ.. ಡಿ ಬಾಸ್​​ಗೆ ಅಭಿಮಾನಿಗಳ ಜೈಕಾರ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.