ಹೊಂಡಕ್ಕೆ ಬಿದ್ದ ಆನೆ ರಕ್ಷಿಸಿದ ಅರಣ್ಯ ಇಲಾಖೆ, ತನ್ನ ಬಳಗ ಸೇರಿ ನಿಟ್ಟುಸಿರು ಬಿಟ್ಟ ಮರಿಯಾನೆ!
ಮಣ್ಣಿನ ಹೊಂಡಕ್ಕೆ ಬಿದ್ದ ಆನೆಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದೆ. ಪುಟ್ಟ ಆನೆ ಮರಿ ಮಣ್ಣಿನ ಗುಂಡಿಯೊಂದಕ್ಕೆ ಬಿದ್ದು ಮೇಲೆ ಬರಲಾರದೆ ಒದ್ದಾಡುತ್ತಿತ್ತು. ಬಳಿಕ ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಜೆಸಿಬಿ ಸಹಾಯದಿಂದ ಹೊಂಡ ಸರಿಸಿ ಆನೆಮರಿಯನ್ನು ಮೇಲೆಕ್ಕೆತ್ತಿ ರಕ್ಷಿಸಿದ್ದಾರೆ. ಹೊಂಡದಿಂದ ಮೇಲೆದ್ದ ಆನೆಮರಿಯನ್ನು ತನ್ನ ಬಳಗವನ್ನು ಸೇರಿ ನಿಟ್ಟುಸಿರು ಬಿಟ್ಟಿದೆ.