ನಿತೀಶ್​ ಜೀ ದೊಡ್ಡ ಮನಸು ಮಾಡಿ ತೇಜಸ್ವಿಗೆ ಸಿಎಂ ಹುದ್ದೆ ಬಿಟ್ಟುಕೊಡಲಿ: ದಿಗ್ವಿಜಯ್​ ಸಿಂಗ್​​

By

Published : Nov 11, 2020, 3:58 PM IST

thumbnail
ಬೋಪಾಲ್​: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 125 ಕ್ಷೇತ್ರ ಹಾಗೂ ಮಹಾಘಟಬಂಧನ್​ 110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಮತ್ತೊಂದು ಅವಧಿಗೆ ನಿತೀಶ್​ ಕುಮಾರ್ ನೇತೃತ್ವದ ಎನ್​ಡಿಎ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತಗೊಂಡಿದ್ದು, ಇದೇ ವಿಷಯವಾಗಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್​ ಸಿಂಗ್ ಮಾತನಾಡಿದ್ದಾರೆ. ನಿತೀಶ್ ಜೀ ಅವರು ದೊಡ್ಡ ಮನಸು ಮಾಡಿ ಪೂರ್ಣ ಹೃದಯದಿಂದ ಮುಖ್ಯಮಂತ್ರಿ ಸ್ಥಾನವನ್ನ ತೇಜಸ್ವಿ ಯಾದವ್​ಗೆ ಬಿಟ್ಟುಕೊಡಬೇಕು. ಜತೆಗೆ ಜೆಡಿಯು ಒಟ್ಟಿಗೆ ಸೇರಿ ಉಪ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.