ಗಾಂಧಿ ನಿಂದಕರು 'ರಾವಣನ ಮಕ್ಕಳು'... ಸಂಸತ್​ನಲ್ಲಿ 'ಕೈ' ಸಂಸದನ ರೋಷಾಗ್ನಿ!

By

Published : Feb 4, 2020, 1:10 PM IST

Updated : Feb 4, 2020, 2:58 PM IST

thumbnail
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೆಲವರ ಕುರಿತು ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತ್​ಕುಮಾರ್​ ಹೆಗಡೆ ವಿರುದ್ಧ ಇದೀಗ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗ್ತಿದ್ದು, ಸದನದಲ್ಲೂ ಇದೇ ವಿಷಯದ ಬಗ್ಗೆ ಕೋಲಾಹಲ ಜೋರಾಗಿತ್ತು. ಬಿಜೆಪಿ ಸಂಸದನ ಹೇಳಿಕೆಗೆ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿರುವ ಪ್ರತಿಪಕ್ಷಗಳು ಕೋಲಾಹಲ ನಡೆಸುತ್ತಿವೆ. ಇದೇ ವಿಷಯವಾಗಿ ಮಾತನಾಡಿರುವ ಕಾಂಗ್ರೆಸ್​ ಮುಖಂಡ ಅಧೀರ್​ ರಂಜನ್​ ಚೌಧರಿ, ಇಂದು ಮಹಾತ್ಮ ಗಾಂಧಿ ಬಗ್ಗೆ ಕೀಳವಾಗಿ ಮಾತನಾಡುವ ಇವರು ರಾವಣನ ಮಕ್ಕಳು, ರಾಮನನ ಪೂಜಿಸುವವರನ್ನ ಅವಮಾನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ತಿರುಗೇಟು ನೀಡಿದ್ದಾರೆ.
Last Updated : Feb 4, 2020, 2:58 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.