ಇರಾನ್ನಲ್ಲಿ ಸಿಲುಕಿದ್ದ 687 ಮೀನುಗಾರರನ್ನು ಸ್ವದೇಶಕ್ಕೆ ಕರೆ ತಂದ INS ಜಲಾಶ್ವ - Fishers news
🎬 Watch Now: Feature Video

ಇರಾನ್ನಲ್ಲಿ ಸಿಲುಕಿದ್ದ 687 ಭಾರತೀಯ ಮೀನುಗಾರರನ್ನು ಭಾರತೀಯ ನೌಕಾಸೇನೆಯ ಜಲಾಶ್ವ ನೌಕೆ ತಮಿಳುನಾಡಿನ ತೂತುಕುಡಿಗೆ ಕರೆ ತಂದಿದೆ.
ಇಲ್ಲಿನ ವಿಒಸಿ ಬಂದರಿನಲ್ಲಿ ಮೀನುಗಾರರನ್ನು ಬರ ಮಾಡಿಕೊಳ್ಳಲಾಯಿತು. ಬಳಿಕ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತಮಿಳುನಾಡಿನ 652 ಮತ್ತು ಕೇರಳದ 35 ಜನರು ಸ್ವದೇಶಕ್ಕೆ ಆಗಮಿಸಿದ್ದು ತಪಾಸಣೆಯ ನಂತರ ಬಸ್ಗಳ ಮೂಲಕ ಆಯಾ ರಾಜ್ಯ ಮತ್ತು ಜಿಲ್ಲೆಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ.