ETV Bharat / sukhibhava

ಮೊದಲ ಬಾರಿಗೆ ನಡೆಯಿತು ಅಪರೂಪದ ಶಸ್ತ್ರಚಿಕಿತ್ಸೆ; ಎರಡು ಯಕೃತ್​​ನಿಂದ ಒಬ್ಬ ವ್ಯಕ್ತಿಗೆ ಕಸಿ

author img

By ETV Bharat Karnataka Team

Published : Dec 22, 2023, 12:53 PM IST

ಸಾಮಾನ್ಯವಾಗಿ ಒಬ್ಬ ದಾನಿಯ ಯಕೃತ್​ ಭಾಗವನ್ನು ರೋಗಿಗೆ ಅಳವಡಿಸಲಾಗುವುದು. ಆದರೆ, ಇಲ್ಲಿ ಇಬ್ಬರು ದಾನಿಗಳು ಯಕೃತ್​ ಭಾಗವನ್ನು ಒಬ್ಬ ವ್ಯಕ್ತಿಗೆ ಕಸಿ ಮಾಡಲಾಗಿದೆ

two-donates-liver-to-one-patients-in-telugu-state
two-donates-liver-to-one-patients-in-telugu-state

ಹೈದರಾಬಾದ್​: ಗಂಭೀರ ಯಕೃತ್​ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಆತನ ಹೆಂಡತಿ ಮತ್ತು ಸಹೋದರ ಇಬ್ಬರು ತಮ್ಮ ದೇಹದ ಅಂಗಾಂಗ ನೀಡಿ ಮರು ಜೀವನ ನೀಡಿದ್ದಾರೆ. ಸಾವಿನ ಅಂಚಿನಲ್ಲಿದ್ದ ವ್ಯಕ್ತಿಗೆ ತಮ್ಮ ದೇಹದ ಯಕೃತ್​ನ ಭಾಗವನ್ನು ನೀಡಿ ಹೊಸ ಬದುಕಿಗೆ ಅವಕಾಶ ನೀಡಿದ್ದಾರೆ. ಈ ರೀತಿ ಅಪರೂಪದ ಶಸ್ತ್ರ ಚಿಕಿತ್ಸೆಯೊಂದನ್ನು ನನಕ್ರಮಗುಡದ ಸ್ಟಾರ್​ ಆಸ್ಪತ್ರೆಯ ವೈದ್ಯರು ನಡೆಸಿದ್ದಾರೆ.

ಮುಖ್ಯ ಯಕೃತ್​​ ಕಸಿ ವೈದ್ಯರಾಗಿರುವ ಡಾ ರಾಘವೇಂದ್ರ ಬಾಬು ಜೊತೆಗೆ ಎಂಡಿ ಡಾ ಗೋಪಿಚಂದ್​ ಮನ್ನಂ ಮತ್ತು ಜೆಎಂಡಿ ಡಾ. ರಮೇಶ್​ ಗುಂಡಪಟಿ ಈ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಸಂಬಂಧ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಅವರು, ಕರ್ನೂಲ್​​ನ 116 ಕೆಜಿ ತೂಕದ ಮಹೇಶ್​ (35) ವ್ಯಕ್ತಿ ಯಕೃತ್​ ಸಮಸ್ಯೆಯಿಂದ ಕಳೆದ ಡಿಸೆಂಬರ್​ನಲ್ಲಿ ಸ್ಟಾರ್​ ಆಸ್ಪತ್ರೆಗೆ ಭೇಟಿ ನೀಡಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಅವರ ಯಕೃತ್​ ಸಂಪೂರ್ಣವಾಗಿ ಹಾನಿಯಾಗಿರುವುದು ಗೊತ್ತಾಗಿತ್ತು. ಇನ್ನೆರಡು ತಿಂಗಳಲ್ಲಿ ಯಕೃತ್​ ಬದಲಾವಣೆ ಮಾಡಿದಲ್ಲಿ ಮಾತ್ರ ಆತ ಬದುಕಲು ಸಾಧ್ಯ ಎಂದು ಮನೆಯವರಿಗೆ ವಿಷಯ ತಿಳಿಸಿದೆವು. ಅವರ ಹೆಂಡತಿ ಈ ವೇಳೆ ಯಕೃತ್​ ದಾನಕ್ಕೆ ಮುಂದಾದರು. ಆದರೆ, ಅಧಿಕ ತೂಕದಿಂದ ಬಳಲುತ್ತಿದ್ದ ಅವರಿಗೆ ಹೆಂಡತಿಯ ಯಕೃತ್​ ಭಾಗ ಒಂದೇ ಸಾಕಾಗಿರಲಿಲ್ಲ.

ಈ ವೇಳೆ ಮಹೇಶ್​ ಸಹೋದರ ಶಿವಕುಮಾರ್​ ಕೂಡ ತಮ್ಮ ಯಕೃತ್​ನ ಒಂದು ಭಾಗವನ್ನು ದಾನ ಮಾಡಲು ಮುಂದೆ ಬಂದರು. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಅಪರೂಪದ ಶಸ್ತ್ರ ಚಿಕಿತ್ಸೆಯೊಂದನ್ನು ಮಾಡಲಾಯಿತು. ಡಾ ಶ್ರೀನಿವಾಸ್​ ರೆಡ್ಡಿ, ಡಾ ರಘುರಾಮ್​ ರೆಡ್ಡಿ, ಡಾ ಸುನೀಲ್​, ಡಾ ಭರತ್​​ ಕುಮಾರ್​ ನಾರಾ ಮತ್ತು ಡಾ ಟಿವಿ ಆದಿತ್ಯ ಚೌದರಿ ಈ ಶಸ್ತ್ರ ಚಿಕಿತ್ಸೆಯನ್ನು ನಡೆಸಿದರು ಎಂದು ವಿವರಣೆ ನೀಡಿದರು.

ಏನಿದು ಯಕೃತ್​ ಚಿಕಿತ್ಸೆ: ದೇಹದ ಪ್ರಮುಖ ಅಂಗಾಂಗಗಳಲ್ಲಿ ಯಕೃತ್​ ಬಹುಮುಖ್ಯವಾಗಿದೆ. ಚಯಾಪಚಯ ಸೇರಿದಂತೆ ಪ್ರಮುಖ ಕಾರ್ಯ ನಿರ್ವಹಣೆಗೆ ಯಕೃತ್​ ಅವಶ್ಯಕವಾಗಿದೆ. ಈ ಯಕೃತ್​ ಅನೇಕ ಸಂದರ್ಭದಲ್ಲಿ ಅಧಿಕ ತೂಕ, ಆಲ್ಕೋಹಾಲ್​ ಸೇವನೆ, ಹೆಪಟೈಟಿಸ್​ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಹಾನಿಯಾಗುತ್ತದೆ. ಯಕೃತ್​ ಸಂಪೂರ್ಣ ಹಾನಿಗೊಂಡಾಗ ಅದರ ಕಸಿ ಅವಶ್ಯಕವಾಗುತ್ತದೆ.

ಹೇಗೆ ನಡೆಯತ್ತೆ ಕಸಿ ಚಿಕಿತ್ಸೆ: ನಮ್ಮ ದೇಹದಲ್ಲಿ ಕತ್ತರಿಸಿದರೂ ಬೆಳೆಯುವ ಅಂಗಾಂಶ ಎಂದರೆ ಯಕೃತ್​ ಆಗಿದೆ. ಈ ಹಿನ್ನೆಲೆ ರೋಗಿಯ ವೈದ್ಯಕೀಯ ಪರಿಸ್ಥಿತಿಗೆ ಸರಿಹೊಂದುವಂತಹ ಆರೋಗ್ಯವಂತ ವ್ಯಕ್ತಿಯ ಯಕೃತ್​ನ ಒಂದು ಭಾಗವನ್ನು ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಇದರಿಂದ ಇಬ್ಬರಿಗೂ ಯಾವುದೇ ತೊಂದರೆ ಇಲ್ಲದೇ ಸಹಜ ಜೀವನ ನಡೆಸಬಹುದಾಗಿದೆ. ಆದರೆ, ರಾಜ್ಯದಲ್ಲಿ ನಡೆದ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳ ಯಕೃತ್​ ಭಾಗವನ್ನು ಒಬ್ಬ ವ್ಯಕ್ತಿಗೆ ಜೋಡಿಸಿದ್ದು, ಬಲು ಅಪರೂಪವಾಗಿದೆ.

ಇದನ್ನೂ ಓದಿ: ಲಿವರ್​ ಸಿರೋಸಿಸ್​: ಕೊನೆಯ ಹಂತದ ಯಕೃತ್​ ಸಮಸ್ಯೆಗೆ ಕಾರಣವೇನು?

ಹೈದರಾಬಾದ್​: ಗಂಭೀರ ಯಕೃತ್​ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಆತನ ಹೆಂಡತಿ ಮತ್ತು ಸಹೋದರ ಇಬ್ಬರು ತಮ್ಮ ದೇಹದ ಅಂಗಾಂಗ ನೀಡಿ ಮರು ಜೀವನ ನೀಡಿದ್ದಾರೆ. ಸಾವಿನ ಅಂಚಿನಲ್ಲಿದ್ದ ವ್ಯಕ್ತಿಗೆ ತಮ್ಮ ದೇಹದ ಯಕೃತ್​ನ ಭಾಗವನ್ನು ನೀಡಿ ಹೊಸ ಬದುಕಿಗೆ ಅವಕಾಶ ನೀಡಿದ್ದಾರೆ. ಈ ರೀತಿ ಅಪರೂಪದ ಶಸ್ತ್ರ ಚಿಕಿತ್ಸೆಯೊಂದನ್ನು ನನಕ್ರಮಗುಡದ ಸ್ಟಾರ್​ ಆಸ್ಪತ್ರೆಯ ವೈದ್ಯರು ನಡೆಸಿದ್ದಾರೆ.

ಮುಖ್ಯ ಯಕೃತ್​​ ಕಸಿ ವೈದ್ಯರಾಗಿರುವ ಡಾ ರಾಘವೇಂದ್ರ ಬಾಬು ಜೊತೆಗೆ ಎಂಡಿ ಡಾ ಗೋಪಿಚಂದ್​ ಮನ್ನಂ ಮತ್ತು ಜೆಎಂಡಿ ಡಾ. ರಮೇಶ್​ ಗುಂಡಪಟಿ ಈ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಸಂಬಂಧ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಅವರು, ಕರ್ನೂಲ್​​ನ 116 ಕೆಜಿ ತೂಕದ ಮಹೇಶ್​ (35) ವ್ಯಕ್ತಿ ಯಕೃತ್​ ಸಮಸ್ಯೆಯಿಂದ ಕಳೆದ ಡಿಸೆಂಬರ್​ನಲ್ಲಿ ಸ್ಟಾರ್​ ಆಸ್ಪತ್ರೆಗೆ ಭೇಟಿ ನೀಡಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಅವರ ಯಕೃತ್​ ಸಂಪೂರ್ಣವಾಗಿ ಹಾನಿಯಾಗಿರುವುದು ಗೊತ್ತಾಗಿತ್ತು. ಇನ್ನೆರಡು ತಿಂಗಳಲ್ಲಿ ಯಕೃತ್​ ಬದಲಾವಣೆ ಮಾಡಿದಲ್ಲಿ ಮಾತ್ರ ಆತ ಬದುಕಲು ಸಾಧ್ಯ ಎಂದು ಮನೆಯವರಿಗೆ ವಿಷಯ ತಿಳಿಸಿದೆವು. ಅವರ ಹೆಂಡತಿ ಈ ವೇಳೆ ಯಕೃತ್​ ದಾನಕ್ಕೆ ಮುಂದಾದರು. ಆದರೆ, ಅಧಿಕ ತೂಕದಿಂದ ಬಳಲುತ್ತಿದ್ದ ಅವರಿಗೆ ಹೆಂಡತಿಯ ಯಕೃತ್​ ಭಾಗ ಒಂದೇ ಸಾಕಾಗಿರಲಿಲ್ಲ.

ಈ ವೇಳೆ ಮಹೇಶ್​ ಸಹೋದರ ಶಿವಕುಮಾರ್​ ಕೂಡ ತಮ್ಮ ಯಕೃತ್​ನ ಒಂದು ಭಾಗವನ್ನು ದಾನ ಮಾಡಲು ಮುಂದೆ ಬಂದರು. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಅಪರೂಪದ ಶಸ್ತ್ರ ಚಿಕಿತ್ಸೆಯೊಂದನ್ನು ಮಾಡಲಾಯಿತು. ಡಾ ಶ್ರೀನಿವಾಸ್​ ರೆಡ್ಡಿ, ಡಾ ರಘುರಾಮ್​ ರೆಡ್ಡಿ, ಡಾ ಸುನೀಲ್​, ಡಾ ಭರತ್​​ ಕುಮಾರ್​ ನಾರಾ ಮತ್ತು ಡಾ ಟಿವಿ ಆದಿತ್ಯ ಚೌದರಿ ಈ ಶಸ್ತ್ರ ಚಿಕಿತ್ಸೆಯನ್ನು ನಡೆಸಿದರು ಎಂದು ವಿವರಣೆ ನೀಡಿದರು.

ಏನಿದು ಯಕೃತ್​ ಚಿಕಿತ್ಸೆ: ದೇಹದ ಪ್ರಮುಖ ಅಂಗಾಂಗಗಳಲ್ಲಿ ಯಕೃತ್​ ಬಹುಮುಖ್ಯವಾಗಿದೆ. ಚಯಾಪಚಯ ಸೇರಿದಂತೆ ಪ್ರಮುಖ ಕಾರ್ಯ ನಿರ್ವಹಣೆಗೆ ಯಕೃತ್​ ಅವಶ್ಯಕವಾಗಿದೆ. ಈ ಯಕೃತ್​ ಅನೇಕ ಸಂದರ್ಭದಲ್ಲಿ ಅಧಿಕ ತೂಕ, ಆಲ್ಕೋಹಾಲ್​ ಸೇವನೆ, ಹೆಪಟೈಟಿಸ್​ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಹಾನಿಯಾಗುತ್ತದೆ. ಯಕೃತ್​ ಸಂಪೂರ್ಣ ಹಾನಿಗೊಂಡಾಗ ಅದರ ಕಸಿ ಅವಶ್ಯಕವಾಗುತ್ತದೆ.

ಹೇಗೆ ನಡೆಯತ್ತೆ ಕಸಿ ಚಿಕಿತ್ಸೆ: ನಮ್ಮ ದೇಹದಲ್ಲಿ ಕತ್ತರಿಸಿದರೂ ಬೆಳೆಯುವ ಅಂಗಾಂಶ ಎಂದರೆ ಯಕೃತ್​ ಆಗಿದೆ. ಈ ಹಿನ್ನೆಲೆ ರೋಗಿಯ ವೈದ್ಯಕೀಯ ಪರಿಸ್ಥಿತಿಗೆ ಸರಿಹೊಂದುವಂತಹ ಆರೋಗ್ಯವಂತ ವ್ಯಕ್ತಿಯ ಯಕೃತ್​ನ ಒಂದು ಭಾಗವನ್ನು ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಇದರಿಂದ ಇಬ್ಬರಿಗೂ ಯಾವುದೇ ತೊಂದರೆ ಇಲ್ಲದೇ ಸಹಜ ಜೀವನ ನಡೆಸಬಹುದಾಗಿದೆ. ಆದರೆ, ರಾಜ್ಯದಲ್ಲಿ ನಡೆದ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳ ಯಕೃತ್​ ಭಾಗವನ್ನು ಒಬ್ಬ ವ್ಯಕ್ತಿಗೆ ಜೋಡಿಸಿದ್ದು, ಬಲು ಅಪರೂಪವಾಗಿದೆ.

ಇದನ್ನೂ ಓದಿ: ಲಿವರ್​ ಸಿರೋಸಿಸ್​: ಕೊನೆಯ ಹಂತದ ಯಕೃತ್​ ಸಮಸ್ಯೆಗೆ ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.