ETV Bharat / sukhibhava

ಕಿವಿಯ ವ್ಯಾಕ್ಸ್‌ ತೆಗೆಯುವ ಅಭ್ಯಾಸವಿದೆಯೇ?: ತಜ್ಞರ ಎಚ್ಚರಿಕೆ ಗಮನಿಸಿ

Experts warning on ear wax: ಮನುಷ್ಯರ ಕಿವಿ ಸ್ವಯಂ ಸ್ವಚ್ಛಗೊಳಿಸುವ ಯಾಂತ್ರಿಕ ವ್ಯವಸ್ಥೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಅದರ ದೈನಂದಿನ ನಿರ್ವಹಣೆ ಅಗತ್ಯವಿಲ್ಲ. ಆದರೆ ಇಲ್ಲೊಂದು ಮಹತ್ವದ ಎಚ್ಚರಿಕೆಯನ್ನು ಪ್ರತಿಯೊಬ್ಬರೂ ಗಮನಿಸಬೇಕು.

author img

By ETV Bharat Karnataka Team

Published : Dec 6, 2023, 4:24 PM IST

remove ear wax since this could lead to hearing loss
remove ear wax since this could lead to hearing loss

ಲಕ್ನೋ(ಉತ್ತರ ಪ್ರದೇಶ): ಕಿವಿಯೊಳಗೆ ವ್ಯಾಕ್ಸ್ ​​ಇದೆ ಅಥವಾ ಏನೋ ಒಂದು ರೀತಿ ಅಹಿತಕರ ಅನುಭವ ಕಂಡುಬಂದಾಕ್ಷಣ ಸಾಮಾನ್ಯವಾಗಿ ಪೆನ್​​, ಇಯರ್ ಬಡ್​ ಅಥವಾ ಕೈ ಬೆರಳುಗಳನ್ನು ಹಾಕಿ ಅದರಲ್ಲಿನ ವ್ಯಾಕ್ಸ್​​​​ ಅಥವಾ ಕಿವಿ ಗುಗ್ಗೆಯನ್ನು ತೆಗೆಯಲು ಮುಂದಾಗುತ್ತೇವೆ. ಆದರೆ, ಈ ರೀತಿ ಮಾಡುವುದು ಅಪಾಯಕಾರಿ. ಇದರಿಂದ ಕೇಳುವ ಸಾಮರ್ಥ್ಯವೇ ಹೋಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ನಾಲ್ಕನೇ ವಾಯ್ಸ್​​ ಕಾನ್​ ಮತ್ತು ಏರ್​ವೇ ಕಾನ್ಫರೆನ್ಸ್​ನಲ್ಲಿ ಈ ಕುರಿತು ಮಾತನಾಡಿರುವ ತಜ್ಞ ವೈದ್ಯರು, ನಗರ ಪ್ರದೇಶದಲ್ಲಿ ಈ ರೀತಿ ಕೇಳುವಿಕೆ ನಷ್ಟದಿಂದ ಪ್ರತಿ ತಿಂಗಳು ನೂರಾರು ಪ್ರಕರಣಗಳು ವರದಿಯಾಗುತ್ತಿವೆ. ಕಿವಿಗೆ ಈ ರೀತಿಯ ವಸ್ತುಗಳನ್ನು ಹಾಕಿಕೊಳ್ಳುವ ಮೂಲಕ ಅನೇಕರು ಉದ್ದೇಶಪೂರಿತವಲ್ಲದೇ ಶ್ರವಣ ನಷ್ಟವನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.

ಓಟೋಲರಿಂಗೋಲಜಿಸ್ಟ್ಸ್ ಅಸೋಸಿಯೇಷನ್​​ನ ಮುಖ್ಯಸ್ಥ ಡಾ.ರಾಕೇಶ್​ ಶ್ರೀವಾತ್ಸವ್​ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಕಿವಿಯು ಸ್ವಯಂ ಸ್ವಚ್ಛಗೊಳಿಸುವ ಯಾಂತ್ರಿಕ ವ್ಯವಸ್ಥೆ ಹೊಂದಿದೆ. ಈ ಹಿನ್ನೆಲೆಯಲ್ಲಿ ದೈನಂದಿನ ನಿರ್ವಹಣೆಯ ಅಗತ್ಯವಿಲ್ಲ. ಕಿವಿ ಗುಗ್ಗೆ ಅಥವಾ ವ್ಯಾಕ್ಸ್​ ಅಥವಾ ಸೆರುಮೆನ್​ ಕಿವಿಯಲ್ಲಿನ ಡ್ರಮ್ಸ್​​ಗಳನ್ನು ನೈಸರ್ಗಿಕವಾಗಿ ರಕ್ಷಣೆ ಮಾಡುತ್ತದೆ. ಇದು ಒಳಗಿವಿಯಲ್ಲಿನ ಧೂಳು ಮತ್ತು ಕೊಳೆಯಿಂದ ರಕ್ಷಿಸುತ್ತದೆ. ಆದರೆ, ಇದನ್ನು ತಿಳಿಯದೇ ಅಸ್ತವ್ಯಸ್ಥವಾಗಿ ಸ್ವಚ್ಛಗೊಳಿಸುವ ಕ್ರಮದಿಂದ ವಾಕ್ಸ್​​ ಕಿವಿಯೊಳಗೆ ಹೋಗುತ್ತದೆ. ಇದರಿಂದ ಹೆಚ್ಚಿನ ಒತ್ತಡ ಉಂಟಾಗಿ, ಕೇಳುವಿಕೆಯ ಶಕ್ತಿ ಕ್ಷಿಣಿಸುತ್ತದೆ. ಅಲ್ಲದೇ ಕಿವಿ ನೋವು ಮತ್ತು ಸೋಂಕಿಗೆ ಗುರಿಯಾಗುತ್ತದೆ. ಪ್ರತಿ ತಿಂಗಳು ಈ ರೀತಿಯ ಐದು ಆರು ಪ್ರಕರಣಗಳು ಬೆಳಕಿಗೆ ಬರುತ್ತಿದೆ ಎಂದರು.

ಮತ್ತೊಬ್ಬ ಶ್ರವಣ ತಜ್ಞ ಡಾ.ಸುಮಿತ್​ ಶರ್ಮಾ ಮಾತನಾಡಿ, ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಮಕ್ಕಳ ಕಿವಿಗೆ ಸಾಸಿವೆ ಎಣ್ಣೆ ಹಾಕುವ ರೂಢಿ ಇದ್ದು, ಈ ರೀತಿ ಎಣ್ಣೆಯನ್ನು ಹಾಕದಂತೆ ಮನವಿ ಮಾಡಿದ್ದಾರೆ. ಕಿವಿಯೊಳಗೆ ಎಣ್ಣೆಯನ್ನು ಹಾಕುವುದರಿಂದ ಯಾವುದೇ ಪ್ರಯೋಜವಿಲ್ಲ. ಇದರಿಂದ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೆಲವು ಮಂದಿಗೆ ಮಾತ್ರ ಗುಗ್ಗೆ ಸಮಸ್ಯೆ ಕಾಡುತ್ತದೆ. ಕಾರಣ ಅವರ ಕಿವಿ ಕೊಳವೆಯ (Ear Canal) ವಿನ್ಯಾಸ ಈ ರೀತಿಯಾಗಿರುತ್ತದೆ. ಇಂಥವರು ಅವಶ್ಯಕತೆ ಇದ್ದಲ್ಲಿ ವೈದ್ಯರ ಮೊರೆ ಹೋಗಬೇಕು. ಅದರ ಬದಲಾಗಿ ಸ್ವಯಂ ವೈದ್ಯರಾಗಬಾರದು ಎಂದರು.

ಕಿವಿಯಲ್ಲಿರುವ ಗುಗ್ಗೆ ಕೊಳೆ ಅದನ್ನು ತೆಗೆಯಬೇಕು ಎನ್ನುತ್ತಾರೆ ಅನೇಕರು. ಆದರೆ, ಈ ವ್ಯಾಕ್ಸ್​​ ಕಿವಿಯ ಡ್ರಮನ್​ ಅನ್ನು ಧೂಳಿನಿಂದ ರಕ್ಷಿಸುತ್ತದೆ. ಅಲ್ಲದೇ, ಕಿವಿಯಲ್ಲಿ ವ್ಯಾಕ್ಸ್​ ಇರುವುದು ಅನೇಕ ಬಾರಿ ಒಳ್ಳೆಯದು. ಸೋಂಕಿನ ಪ್ರಕರಣದಲ್ಲೂ ನಾವು ಸೋಂಕು ನಿವಾರಣೆ ಆದ ಬಳಿಕವೇ ಈ ವ್ಯಾಕ್ಸ್​ ತೆಗೆಯುತ್ತೇವೆ ಎನ್ನುತ್ತಾರೆ ಡಾ.ಆಶೀಶ್​ ಚಂದ್ರ.(ಐಎಎನ್​ಎಸ್​​)

ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ತುಟಿ ಬಿರುಕು ಸಮಸ್ಯೆ: ಈ ತಪ್ಪು ಮಾಡಲೇಬೇಡಿ

ಲಕ್ನೋ(ಉತ್ತರ ಪ್ರದೇಶ): ಕಿವಿಯೊಳಗೆ ವ್ಯಾಕ್ಸ್ ​​ಇದೆ ಅಥವಾ ಏನೋ ಒಂದು ರೀತಿ ಅಹಿತಕರ ಅನುಭವ ಕಂಡುಬಂದಾಕ್ಷಣ ಸಾಮಾನ್ಯವಾಗಿ ಪೆನ್​​, ಇಯರ್ ಬಡ್​ ಅಥವಾ ಕೈ ಬೆರಳುಗಳನ್ನು ಹಾಕಿ ಅದರಲ್ಲಿನ ವ್ಯಾಕ್ಸ್​​​​ ಅಥವಾ ಕಿವಿ ಗುಗ್ಗೆಯನ್ನು ತೆಗೆಯಲು ಮುಂದಾಗುತ್ತೇವೆ. ಆದರೆ, ಈ ರೀತಿ ಮಾಡುವುದು ಅಪಾಯಕಾರಿ. ಇದರಿಂದ ಕೇಳುವ ಸಾಮರ್ಥ್ಯವೇ ಹೋಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ನಾಲ್ಕನೇ ವಾಯ್ಸ್​​ ಕಾನ್​ ಮತ್ತು ಏರ್​ವೇ ಕಾನ್ಫರೆನ್ಸ್​ನಲ್ಲಿ ಈ ಕುರಿತು ಮಾತನಾಡಿರುವ ತಜ್ಞ ವೈದ್ಯರು, ನಗರ ಪ್ರದೇಶದಲ್ಲಿ ಈ ರೀತಿ ಕೇಳುವಿಕೆ ನಷ್ಟದಿಂದ ಪ್ರತಿ ತಿಂಗಳು ನೂರಾರು ಪ್ರಕರಣಗಳು ವರದಿಯಾಗುತ್ತಿವೆ. ಕಿವಿಗೆ ಈ ರೀತಿಯ ವಸ್ತುಗಳನ್ನು ಹಾಕಿಕೊಳ್ಳುವ ಮೂಲಕ ಅನೇಕರು ಉದ್ದೇಶಪೂರಿತವಲ್ಲದೇ ಶ್ರವಣ ನಷ್ಟವನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.

ಓಟೋಲರಿಂಗೋಲಜಿಸ್ಟ್ಸ್ ಅಸೋಸಿಯೇಷನ್​​ನ ಮುಖ್ಯಸ್ಥ ಡಾ.ರಾಕೇಶ್​ ಶ್ರೀವಾತ್ಸವ್​ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಕಿವಿಯು ಸ್ವಯಂ ಸ್ವಚ್ಛಗೊಳಿಸುವ ಯಾಂತ್ರಿಕ ವ್ಯವಸ್ಥೆ ಹೊಂದಿದೆ. ಈ ಹಿನ್ನೆಲೆಯಲ್ಲಿ ದೈನಂದಿನ ನಿರ್ವಹಣೆಯ ಅಗತ್ಯವಿಲ್ಲ. ಕಿವಿ ಗುಗ್ಗೆ ಅಥವಾ ವ್ಯಾಕ್ಸ್​ ಅಥವಾ ಸೆರುಮೆನ್​ ಕಿವಿಯಲ್ಲಿನ ಡ್ರಮ್ಸ್​​ಗಳನ್ನು ನೈಸರ್ಗಿಕವಾಗಿ ರಕ್ಷಣೆ ಮಾಡುತ್ತದೆ. ಇದು ಒಳಗಿವಿಯಲ್ಲಿನ ಧೂಳು ಮತ್ತು ಕೊಳೆಯಿಂದ ರಕ್ಷಿಸುತ್ತದೆ. ಆದರೆ, ಇದನ್ನು ತಿಳಿಯದೇ ಅಸ್ತವ್ಯಸ್ಥವಾಗಿ ಸ್ವಚ್ಛಗೊಳಿಸುವ ಕ್ರಮದಿಂದ ವಾಕ್ಸ್​​ ಕಿವಿಯೊಳಗೆ ಹೋಗುತ್ತದೆ. ಇದರಿಂದ ಹೆಚ್ಚಿನ ಒತ್ತಡ ಉಂಟಾಗಿ, ಕೇಳುವಿಕೆಯ ಶಕ್ತಿ ಕ್ಷಿಣಿಸುತ್ತದೆ. ಅಲ್ಲದೇ ಕಿವಿ ನೋವು ಮತ್ತು ಸೋಂಕಿಗೆ ಗುರಿಯಾಗುತ್ತದೆ. ಪ್ರತಿ ತಿಂಗಳು ಈ ರೀತಿಯ ಐದು ಆರು ಪ್ರಕರಣಗಳು ಬೆಳಕಿಗೆ ಬರುತ್ತಿದೆ ಎಂದರು.

ಮತ್ತೊಬ್ಬ ಶ್ರವಣ ತಜ್ಞ ಡಾ.ಸುಮಿತ್​ ಶರ್ಮಾ ಮಾತನಾಡಿ, ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಮಕ್ಕಳ ಕಿವಿಗೆ ಸಾಸಿವೆ ಎಣ್ಣೆ ಹಾಕುವ ರೂಢಿ ಇದ್ದು, ಈ ರೀತಿ ಎಣ್ಣೆಯನ್ನು ಹಾಕದಂತೆ ಮನವಿ ಮಾಡಿದ್ದಾರೆ. ಕಿವಿಯೊಳಗೆ ಎಣ್ಣೆಯನ್ನು ಹಾಕುವುದರಿಂದ ಯಾವುದೇ ಪ್ರಯೋಜವಿಲ್ಲ. ಇದರಿಂದ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೆಲವು ಮಂದಿಗೆ ಮಾತ್ರ ಗುಗ್ಗೆ ಸಮಸ್ಯೆ ಕಾಡುತ್ತದೆ. ಕಾರಣ ಅವರ ಕಿವಿ ಕೊಳವೆಯ (Ear Canal) ವಿನ್ಯಾಸ ಈ ರೀತಿಯಾಗಿರುತ್ತದೆ. ಇಂಥವರು ಅವಶ್ಯಕತೆ ಇದ್ದಲ್ಲಿ ವೈದ್ಯರ ಮೊರೆ ಹೋಗಬೇಕು. ಅದರ ಬದಲಾಗಿ ಸ್ವಯಂ ವೈದ್ಯರಾಗಬಾರದು ಎಂದರು.

ಕಿವಿಯಲ್ಲಿರುವ ಗುಗ್ಗೆ ಕೊಳೆ ಅದನ್ನು ತೆಗೆಯಬೇಕು ಎನ್ನುತ್ತಾರೆ ಅನೇಕರು. ಆದರೆ, ಈ ವ್ಯಾಕ್ಸ್​​ ಕಿವಿಯ ಡ್ರಮನ್​ ಅನ್ನು ಧೂಳಿನಿಂದ ರಕ್ಷಿಸುತ್ತದೆ. ಅಲ್ಲದೇ, ಕಿವಿಯಲ್ಲಿ ವ್ಯಾಕ್ಸ್​ ಇರುವುದು ಅನೇಕ ಬಾರಿ ಒಳ್ಳೆಯದು. ಸೋಂಕಿನ ಪ್ರಕರಣದಲ್ಲೂ ನಾವು ಸೋಂಕು ನಿವಾರಣೆ ಆದ ಬಳಿಕವೇ ಈ ವ್ಯಾಕ್ಸ್​ ತೆಗೆಯುತ್ತೇವೆ ಎನ್ನುತ್ತಾರೆ ಡಾ.ಆಶೀಶ್​ ಚಂದ್ರ.(ಐಎಎನ್​ಎಸ್​​)

ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ತುಟಿ ಬಿರುಕು ಸಮಸ್ಯೆ: ಈ ತಪ್ಪು ಮಾಡಲೇಬೇಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.