ತಿರುವನಂತರಪುರಂ: ಸಾಂಪ್ರದಾಯಿಕ ಬುದ್ದಿವಂತಿಕೆ ಮತ್ತು ಆಧುನಿಕ ವಿಜ್ಞಾನ ಒಟ್ಟಿಗೆ ಅಸ್ತಿತ್ವದಲ್ಲಿದೆ. ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ಅಭಿವೃದ್ಧಿಯಲ್ಲಿ ಆಯುರ್ವೇದ ಪ್ರಯೋಜನವನ್ನು ಅಳವಡಿಸಿಕೊಳ್ಳಬಹುದು ಎಂದು ಜಾಗತಿಕ ಖ್ಯಾತ ಆಂಕಲಾಜಿಸ್ಟ್, ನ್ಯೂಯಾರ್ಕ್ನ ಮೆಮೋರಿಯಲ್ ಸ್ಲೊನ್ ಕೆಟ್ಟೆರಿಂಗ್ ಕ್ಯಾನ್ಸರ್ ಸೆಂಟರ್ನ ಡಾ.ಜೂನ್ ಮೌ ತಿಳಿಸಿದ್ದಾರೆ.
ಡಿಸೆಂಬರ್ 1ರಿಂದ 5ರವರಗೆ ದಿ ಗ್ಲೋಬಲ್ ಆಯುರ್ವೇದ ಫೆಸ್ಟಿಫಲ್ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳನ್ನು ಪರಿಹರಿಸಲು ಆಯುರ್ವೇದ ಮತ್ತು ಆಧುನಿಕ ಔಷಧವನ್ನು ಸಂಯೋಜಿಸುವ ಕುರಿತು ಚರ್ಚೆಗಳನ್ನು ನಡೆಸಲಾಗಿದೆ. ಈ ಸಮಾವೇಶದಲ್ಲಿ ಮಾತನಾಡಿದ ಮೌ, ಆಯುರ್ವೇದ ಸಮಾವೇಶಕ್ಕೆ ಇಲ್ಲಿಗೆ ಬಂದಿಳಿದ ಬಳಿಕ ಆಯುರ್ವೇದ ಮಸಾಜ್ ಮತ್ತು ತೈಲ ಮಸಾಜ್ ಪ್ರಯೋಜನ ಪಡೆದಿದ್ದಾಗಿ ಹೇಳಿದರು.
ಚಿಕಿತ್ಸೆಯಲ್ಲಿ ಆಯುರ್ವೇದದ ಪ್ರಭಾವಶಾಲಿ ತಂತ್ರದಿಂದ ಪ್ರಭಾವಿತನಾದೆ. ಕ್ಯಾನ್ಸರ್ ಚಿಕಿತ್ಸೆಗಳಾದ ರೇಡಿಯೇಷನ್ ಮತ್ತು ಕಿಮೋಥೆರಪಿಯ ಅಡ್ಡ ಪಡಿಣಾಮದಿಂದ ಬಳಲುವ ರೋಗಿಗಳಿಗೆ ಆಯುರ್ವೇದ ಪ್ರಯೋಜನವೂ ಸಹಾಯಕವಾಗಬಲ್ಲದು ಎಂದರು. ಆಯುರ್ವೇದಂತಹ ಪರ್ಯಾಯ ಚಿಕಿತ್ಸೆಯು ಕ್ಯಾನ್ಸರ್ ರೋಗಿಗಳ ಜೀವನ ಗುಣಮಟ್ಟ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.
ಸಾಂಪ್ರದಾಯಿಕ ಬುದ್ದಿವಂತಿಕೆ ಮತ್ತು ಆಧುನಿಕ ಚಿಕಿತ್ಸೆ ಒಟ್ಟಿಗೆ ಅಸ್ತಿತ್ವದಲ್ಲಿರಬಹುದು. ಇವರೆಡನ್ನೂ ಸಮತೋಲನ ಮಾಡಬೇಕಿದೆ. ಈ ಕ್ಷೇತ್ರಗಳಲ್ಲಿ ಸಾಮರಸ್ಯ ಮೂಡಿಸಬೇಕಿದೆ ಎಂದರು. ಅಲ್ಲದೇ ತಮ್ಮ ಸಂಶೋಧನಾ ಕೇಂದ್ರವೂ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯೋಗ, ಚೀನಾದ ಚಿಕಿತ್ಸೆ ಮತ್ತು ಅಕ್ಯುಪಂಕ್ಚರ್ ಸಂಯೋಜಿತ ಅಂಶಗಳಿಂದ ಕೂಡಿದೆ.
ಭಾರತದಲ್ಲಿ ಆಯುರ್ವೇದ ಸಾಕಷ್ಟು ಬುದ್ದಿವಂತಿಕೆ ಮತ್ತು ಅನುಭವ ಹೊಂದಿದ್ದು, ಶತಮಾನಗಳಿಂದ ಅಭ್ಯಾಸ ಮಾಡುತ್ತಿರುವ ಇದರಿಂದ ಜಗತ್ತು ಸಾಕಷ್ಟು ಕಲಿಯಬಹುದಾಗಿದೆ. ಸಮಾವೇಶದಲ್ಲಿ ಮಾತನಾಡಿದ ಟೆಕ್ಸಾಸ್ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೋಫೆಸರ್ ಮತ್ತು ಆ್ಯಡ್ರೆಸನ್ ಕ್ಯಾನ್ಸರ್ ಸೆಂಟರ್ನ ಎಂಡಿ ಡಾ.ಸಂತೋಷಿ ನಾರಾಯಣ್ ಮತ್ತು ಅವರ ತಂಡ, ರೋಗಿಗಳು ಮತ್ತು ಆಂಕೋಲಾಜಿಸ್ಟ್ ಇದೇ ರೀತಿಯ ಮಾಹಿತಿಯಲ್ಲಿ ಚಿಕಿತ್ಸೆಯನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಕ್ಯಾನ್ಸರ್ ರೋಗಿಗಳ ಆಹಾರ ಪದ್ಧತಿ, ನೀವು ನಿರ್ವಹಣೆ ಮತ್ತು ಆರೋಗ್ಯಯುತ ಜೀವನಶೈಲಿಗೆ ಗಮನಹರಿಸಿದ್ದಾಗಿ ಹೇಳಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಹೊರಾಂಗಣ ವಾಯು ಮಾಲಿನ್ಯದಿಂದ ಭಾರತದಲ್ಲಿ ಪ್ರತಿ ವರ್ಷ 2.18 ಮಿಲಿಯನ್ ಸಾವು; ಅಧ್ಯಯನ