ETV Bharat / state

ಹೊಸ ವರ್ಷಾಚರಣೆಗೆ ಕ್ಷಣಗಣನೆ: ಶಾಂತಿಯುತ ಆಚರಣೆಗೆ ಯಾದಗಿರಿ ಎಸ್​ಪಿ ಕರೆ.. - Yadagiri news year news

ಹೊಸವರ್ಷಾಚರಣೆಗೆ ಯಾದಗಿರಿ ಜಿಲ್ಲೆಯ ಜನ ಸಿದ್ಧತೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗಲಾಟೆ-ಗದ್ದಲ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ಎಚ್ಚರಿಸಿದ್ದಾರೆ.

ಯಾದಗಿರಿ ಎಸ್​ಪಿ, Yadagiri SP request to celebrate new year peacefully
ಯಾದಗಿರಿ ಎಸ್​ಪಿ
author img

By

Published : Dec 31, 2019, 7:20 PM IST

Updated : Dec 31, 2019, 7:26 PM IST

ಯಾದಗಿರಿ: ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾದಗಿರಿ ಜಿಲ್ಲೆಯ ಜನರು ಶಾಂತಿಯುತವಾಗಿ ಸಂಭ್ರಮಾಚರಣೆ ಮಾಡುವಂತೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ಮನವಿ ಮಾಡಿದ್ದಾರೆ.

ಇಂದು ಮಧ್ಯರಾತ್ರಿ 12 ಗಂಟೆಗೆ ಹೊಸವರ್ಷ 2020 ಆರಂಭವಾಗಲಿದ್ದು, ಜಿಲ್ಲೆಯ ಜನ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಯಾವುದೇ ಗಲಾಟೆ-ಗದ್ದಲ ಮಾಡದೆ, ಶಾಂತಿಯುತವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿ. ಆದರೆ, ಸಂಭ್ರಮಾಚಾರಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಪಾನಮತ್ತರಾಗಿ ವಾಹನ ಚಾಲಾಯಿಸುವುದು, ತ್ರಿಪಲ್ ರೈಡ್​ ಮಾಡುವುದು ​ಅಪರಾಧ. ಗಲಾಟೆ-ಗದ್ದಲ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಸೋನಾವಣೆ ಎಚ್ಚರಿಸಿದ್ದಾರೆ.

ಹೊಸ ವರ್ಷದ ಸಂಭ್ರಮದ ವೇಳೆ ಅಹಿತಕರ ಘಟನೆ ತಡೆಗಟ್ಟಲು ಜಿಲ್ಲೆಯ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ. 10ಕ್ಕೂ ಹೆಚ್ಚು ಚೆಕ್​ಪೋಸ್ಟ್​ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಷ್ ಭಗವಾನ್ ತಿಳಿಸಿದ್ದಾರೆ‌.

ಯಾದಗಿರಿ: ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾದಗಿರಿ ಜಿಲ್ಲೆಯ ಜನರು ಶಾಂತಿಯುತವಾಗಿ ಸಂಭ್ರಮಾಚರಣೆ ಮಾಡುವಂತೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ಮನವಿ ಮಾಡಿದ್ದಾರೆ.

ಇಂದು ಮಧ್ಯರಾತ್ರಿ 12 ಗಂಟೆಗೆ ಹೊಸವರ್ಷ 2020 ಆರಂಭವಾಗಲಿದ್ದು, ಜಿಲ್ಲೆಯ ಜನ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಯಾವುದೇ ಗಲಾಟೆ-ಗದ್ದಲ ಮಾಡದೆ, ಶಾಂತಿಯುತವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿ. ಆದರೆ, ಸಂಭ್ರಮಾಚಾರಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಪಾನಮತ್ತರಾಗಿ ವಾಹನ ಚಾಲಾಯಿಸುವುದು, ತ್ರಿಪಲ್ ರೈಡ್​ ಮಾಡುವುದು ​ಅಪರಾಧ. ಗಲಾಟೆ-ಗದ್ದಲ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಸೋನಾವಣೆ ಎಚ್ಚರಿಸಿದ್ದಾರೆ.

ಹೊಸ ವರ್ಷದ ಸಂಭ್ರಮದ ವೇಳೆ ಅಹಿತಕರ ಘಟನೆ ತಡೆಗಟ್ಟಲು ಜಿಲ್ಲೆಯ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ. 10ಕ್ಕೂ ಹೆಚ್ಚು ಚೆಕ್​ಪೋಸ್ಟ್​ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಷ್ ಭಗವಾನ್ ತಿಳಿಸಿದ್ದಾರೆ‌.

Intro:ಯಾದಗಿರಿ: 2020 ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಆರಂಭವಾಗಲಿದ್ದು ಯಾದಗಿರಿ ಜಿಲ್ಲೆಯ ಜನ್ರು ಶಾಂತಿಯುತವಾಗಿ ಆಚರಣೆ ಮಾಡುವಂತೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ರಿಷಿಕೇಶ್ ಭಗವಾನ ಸೋನಾವಣೆ ಮನವಿ ಮಾಡಿದ್ದಾರೆ.

Body:ಇಂದು ಮಧ್ಯೆ ರಾತ್ರಿ 12ಗಂಟೆಗೆ 2019 ವರ್ಷ ಕಳೆದು 2020ನೇ ವರ್ಷಕ್ಕೆ ಕಾಲಿಡುತ್ತಿದ್ದು, ಜಿಲ್ಲೆಯ ಜನ್ರು ಹೊಸ ವರ್ಷ ಆಚರಣೆ ಸಿದ್ದತೆ ನಡೆಸುತ್ತಿದ್ದು ಯಾವುದೇ ಗಲಾಟೆ ಗದ್ದಲ ಮಾಡದೆ, ಶಾಂತಿಯುತವಾಗಿ ಕೆಕ್ ಕತ್ತರಿಸಿ ಸಂಭ್ರಮಿಸಿಲಿ, ಆದ್ರೇ ಸಂಭ್ರಮದ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಪಾನಮತರಾಗಿ ವಾಹನಗಳು ಚಾಲನೆ ಮಾಡುವುದು, ತ್ರೀಬಲ್ ರೆಡ್ ಹೋಗುವುದು ಅಪರಾಧವಾಗಿದೆ. ಗಲಾಟೆ ಗದ್ದಲ ಮಾಡಿದ್ದು ಕಂಡು ಬಂದಲ್ಲಿ ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Conclusion:ಈಗಾಗಲೇ ಹೊಸ ವರ್ಷದ ನಿಮಿತ್ತ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಲು ಜಿಲ್ಲೆಯ ವಿವಿಧಡೆ ಬಿಗಿ ಪೊಲೀಸ್ ಬಂದೋಬಸ್ಥ, 10ಕ್ಕಿ ಹೆಚ್ಚು ಚೆಕ್ ಪೋಸ್ಟ್ ಗಳನ್ನು ತೆರಯಲಾಗಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ರಿಷಿಕೇಷ್ ಭಗವಾನ ತಿಳಿಸಿದ್ದಾರೆ‌.

ಬೈಟ್: ರಿಷಿಕೇಶ್ ಭಗವಾನ ಸೋನಾವಣೆ_ಪೋಲಿಸ್ ವರಿಷ್ಠಾಧಿಕಾರಿ ಯಾದಗಿರಿ
Last Updated : Dec 31, 2019, 7:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.