ETV Bharat / state

ಯಾದಗಿರಿಯಲ್ಲಿ ಮೂವರು ಕೊಲೆ ಆರೋಪಿಗಳ ಬಂಧನ

author img

By

Published : Nov 19, 2019, 1:37 PM IST

ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಾದಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಯಾದಗಿರಿಯಲ್ಲಿ ಮೂವರು ಕೊಲೆ ಆರೋಪಿಗಳ ಬಂಧನ

ಯಾದಗಿರಿ: ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ನಿವಾಸಿ ಯಲ್ಲಪ್ಪ ದರಮುಗರ ಎಂಬುವನನ್ನು ಆರೋಪಿಗಳಾದ ಗಿಡ್ಡಪ್ಪ ತಂದೆ ಲಕ್ಷ್ಮಣ, ಲಕ್ಷಣ ತಂದೆ ದುರಗಪ್ಪ ಮತ್ತು ಕಿರಣ ಎಂಬವರು ಸೇರಿ ನವೆಂಬರ್​ 9 ರಂದು ಮಂಗಳೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಬಡಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.

ಅಲ್ಲದೇ, ಪ್ರಕರಣ ಮುಚ್ಚಿ ಹಾಕಲು ಮೃತದೇಹಕ್ಕೆ ಕಲ್ಲು ಕಟ್ಟಿ ಪಕ್ಕದ ಬಾವಿಯಲ್ಲಿ ಎಸೆದು ಹೋಗಿದ್ದರು. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು, ಯಾದಗಿರಿ ಎಸ್.ಪಿ ರಿಷಿಕೇಶ್ ಭಗವಾನ ಸೋನಾವಣೆ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿ ಕಾರ್ಯಚರಣೆ ನಡೆಸಿ ಒಬ್ಬ ಆರೋಪಿಯನ್ನು ಹುಬ್ಬಳಿಯಲ್ಲಿ, ಇಬ್ಬರನ್ನು ತಿಂತಣಿ ಬ್ರಿಡ್ಜ್​, ಹಾಗೂ ಇನ್ನೋರ್ವನನ್ನು ಹುಣಸಿಗಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಬೈಕ್ ಮತ್ತು ಕೊಲೆಗೆ ಬಳಸಿದ ಆಯುಧಗಳನ್ನು ಜಪ್ತಿ ಮಾಡಲಾಗಿದೆ.‌

ಯಾದಗಿರಿ: ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ನಿವಾಸಿ ಯಲ್ಲಪ್ಪ ದರಮುಗರ ಎಂಬುವನನ್ನು ಆರೋಪಿಗಳಾದ ಗಿಡ್ಡಪ್ಪ ತಂದೆ ಲಕ್ಷ್ಮಣ, ಲಕ್ಷಣ ತಂದೆ ದುರಗಪ್ಪ ಮತ್ತು ಕಿರಣ ಎಂಬವರು ಸೇರಿ ನವೆಂಬರ್​ 9 ರಂದು ಮಂಗಳೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಬಡಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.

ಅಲ್ಲದೇ, ಪ್ರಕರಣ ಮುಚ್ಚಿ ಹಾಕಲು ಮೃತದೇಹಕ್ಕೆ ಕಲ್ಲು ಕಟ್ಟಿ ಪಕ್ಕದ ಬಾವಿಯಲ್ಲಿ ಎಸೆದು ಹೋಗಿದ್ದರು. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು, ಯಾದಗಿರಿ ಎಸ್.ಪಿ ರಿಷಿಕೇಶ್ ಭಗವಾನ ಸೋನಾವಣೆ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿ ಕಾರ್ಯಚರಣೆ ನಡೆಸಿ ಒಬ್ಬ ಆರೋಪಿಯನ್ನು ಹುಬ್ಬಳಿಯಲ್ಲಿ, ಇಬ್ಬರನ್ನು ತಿಂತಣಿ ಬ್ರಿಡ್ಜ್​, ಹಾಗೂ ಇನ್ನೋರ್ವನನ್ನು ಹುಣಸಿಗಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಬೈಕ್ ಮತ್ತು ಕೊಲೆಗೆ ಬಳಸಿದ ಆಯುಧಗಳನ್ನು ಜಪ್ತಿ ಮಾಡಲಾಗಿದೆ.‌

Intro:ಯಾದಗಿರಿ: ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯೋರ್ವನನ್ನ ಕೋಲೆ ಮಾಡಿದಂತಾ ಮೂರು ಜನ ಆರೋಪಿಗಳನ್ನ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ನೀವಾಸಿ ಯಲ್ಲಪ್ಪ ದರಮುಗರ ಎಂಬುವಾತನನ್ನ ಆರೋಪಿಗಳಾದಂತ ಗಿಡ್ಡಪ್ಪ ತಂದೆ ಲಕ್ಷ್ಮಣ, ಲಕ್ಮಣ ತಂದೆ ದುರಗಪ್ಪ, ಮತ್ತು ಕೀರಣ ಎಂಬುವಾತರು ಇದೆ ನ 9 ರಂದು ಮಂಗಳೂರು ಹ್ರಾಮದ ಹೊರವಲಯದ ಜಮೀನು ಒಂದರಲ್ಲಿ ಬಡಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು...

Body:ಕೊಲೆ ಪ್ರಕರಣವನ್ನ ಮುಚ್ಚಿ ಹಾಕಲು ಕೊಲೆಯಾದ ಯಲ್ಲಪ್ಪನ ಶವಕ್ಕೆ ಹಗ್ಗದಿಂದ ಕಲ್ಲು ಕಟ್ಟಿ ಜಮಿನಿನಲ್ಲಿದ್ದ ಬಾವಿಯಲ್ಲಿ ಕೊಲೆಗಡುಕರು ಬಿಸಾಕಿ ಹೋಗಿದ್ದರು. ಈ ಕುರಿತು ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು...

Conclusion:ಕೊಲೆ ಪ್ರಕರಣವನ್ನ ಬೆಧೀಸಲು ಯಾದಗಿರಿ ಎಸ್ ಪಿ ರಿಷಿಕೇಶ್ ಭಗವಾನ ಸೋನಾವಣೆ ಅವರ ನೇತ್ರತ್ವದಲ್ಲಿ ಎರಡು ತಂಡಗಳನ್ನ ರಚಿಸಿ ಕರ್ಯಚರಣೆ ನಡೆಸಲಾಗಿದ್ದು, ಒಬ್ಬ ಆರೋಪಿಗಳನ್ನ ಪೋಲಿಸರು ಹುಬ್ಬಳಿಯಲ್ಲಿ ಬಂಧಿಸಲಾಗಿದ್ದು ಇನ್ನಿಬ್ಬರನ್ನ ತಿಂತಣಿ ಬ್ರಿಜ್, ಮತ್ತು ಹುಣಸಿಗಿಯಲ್ಲಿ ಬಂಧಿಸಿದ್ದರೆ. ಆರೋಪಿಗಳಿಂದ ಎರಡು ಬೈಕ್ ಮತ್ತು ಕೊಲೆಗೆ ಬಳಸಿದಂತಾ ಆಯುಧಗಳನ್ನು ಪೋಲಿಸರು ಜಪ್ತಿ ಮಾಡಿಕೊಂಡಿಸ್ದಾರೆ....‌
ETV Bharat Logo

Copyright © 2024 Ushodaya Enterprises Pvt. Ltd., All Rights Reserved.