ETV Bharat / state

ಕೋವಿಡ್​ ನಿಯಂತ್ರಣ ಬಳಿಕವೇ ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ: ಆರ್.ಶಂಕರ್

author img

By

Published : May 17, 2021, 9:57 AM IST

ತೋಟಗಾರಿಕೆ ಸಚಿವ ಆರ್.ಶಂಕರ್​ ಅವರು ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

gurumathakal
ತೋಟಗಾರಿಕೆ ಸಚಿವ ಆರ್.ಶಂಕರ್​

ಗುರುಮಠಕಲ್ (ಯಾದಗಿರಿ): ಕೋವಿಡ್ ಸೋಂಕು ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಮಾರಕ ರೋಗದ ಸಂಕಷ್ಟದಿಂದ ಸಂಪೂರ್ಣ ಹೊರಬಂದ ನಂತರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ತೋಟಗಾರಿಕೆ ಸಚಿವ ಆರ್.ಶಂಕರ್ ಹೇಳಿದರು.

ಕೋವಿಡ್​ ನಿಯಂತ್ರಣದ ಬಳಿಕವೇ ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ: ಆರ್.ಶಂಕರ್

ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ವೇಳೆ ಮಾತನಾಡಿದ ಸಚಿವರು, ಗುರುಮಠಕಲ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಎಲ್ಲಾ ವ್ಯವಸ್ಥೆಗಳೂ ಇವೆ. ಸದ್ಯ ಇಲ್ಲಿ ರೋಗಿಗಳೇ ಇಲ್ಲ ಎಂದರು.

ಸೋಮವಾರ ಹಾಗು ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಬುಧವಾರದಿಂದ ಭಾನುವಾರದ ವರೆಗೆ ಸ್ವಯಂ ಘೋಷಿತ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗುತ್ತಿದೆ. ಎಲ್ಲರೂ ಸಹಕರಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಇನ್ನು, ಯಾವುದೇ ಪಕ್ಷ ಬೇಧವಿಲ್ಲದೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಆಡಳಿತ, ವಿರೋಧ ಪಕ್ಷದವರು ಎನ್ನುವ ಯಾವ ತಾರತಮ್ಯ ಮಾಡುತ್ತಿಲ್ಲ. ವಿಮಾನ ಪ್ರಯಾಣದ ಸಮಯ ಪದೇ-ಪದೇ ಬದಲಾವಣೆಯಾದ ಕಾರಣ ಅಧಿಕೃತ ಪ್ರವಾಸ ಪಟ್ಟಿಯಲ್ಲಿ ಬದಲಾವಣೆಗಳಾದವು. ಆದರೂ ಜಿಲ್ಲೆಯ ಎಲ್ಲಾ 6 ತಾಲ್ಲೂಕುಗಳಿಗೂ ಭೇಟಿ ನೀಡಿದ್ದೇನೆ ಎಂದರು.

ಇದನ್ನೂ ಓದಿ: ಕೋವಿಡ್ ಸೋಂಕು ಹೆಚ್ಚಳ: ಕೊಪ್ಪಳ ಜಿಲ್ಲೆ 5 ದಿನ ಸಂಪೂರ್ಣ ಲಾಕ್​​

ಗುರುಮಠಕಲ್ (ಯಾದಗಿರಿ): ಕೋವಿಡ್ ಸೋಂಕು ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಮಾರಕ ರೋಗದ ಸಂಕಷ್ಟದಿಂದ ಸಂಪೂರ್ಣ ಹೊರಬಂದ ನಂತರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ತೋಟಗಾರಿಕೆ ಸಚಿವ ಆರ್.ಶಂಕರ್ ಹೇಳಿದರು.

ಕೋವಿಡ್​ ನಿಯಂತ್ರಣದ ಬಳಿಕವೇ ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ: ಆರ್.ಶಂಕರ್

ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ವೇಳೆ ಮಾತನಾಡಿದ ಸಚಿವರು, ಗುರುಮಠಕಲ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಎಲ್ಲಾ ವ್ಯವಸ್ಥೆಗಳೂ ಇವೆ. ಸದ್ಯ ಇಲ್ಲಿ ರೋಗಿಗಳೇ ಇಲ್ಲ ಎಂದರು.

ಸೋಮವಾರ ಹಾಗು ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಬುಧವಾರದಿಂದ ಭಾನುವಾರದ ವರೆಗೆ ಸ್ವಯಂ ಘೋಷಿತ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗುತ್ತಿದೆ. ಎಲ್ಲರೂ ಸಹಕರಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಇನ್ನು, ಯಾವುದೇ ಪಕ್ಷ ಬೇಧವಿಲ್ಲದೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಆಡಳಿತ, ವಿರೋಧ ಪಕ್ಷದವರು ಎನ್ನುವ ಯಾವ ತಾರತಮ್ಯ ಮಾಡುತ್ತಿಲ್ಲ. ವಿಮಾನ ಪ್ರಯಾಣದ ಸಮಯ ಪದೇ-ಪದೇ ಬದಲಾವಣೆಯಾದ ಕಾರಣ ಅಧಿಕೃತ ಪ್ರವಾಸ ಪಟ್ಟಿಯಲ್ಲಿ ಬದಲಾವಣೆಗಳಾದವು. ಆದರೂ ಜಿಲ್ಲೆಯ ಎಲ್ಲಾ 6 ತಾಲ್ಲೂಕುಗಳಿಗೂ ಭೇಟಿ ನೀಡಿದ್ದೇನೆ ಎಂದರು.

ಇದನ್ನೂ ಓದಿ: ಕೋವಿಡ್ ಸೋಂಕು ಹೆಚ್ಚಳ: ಕೊಪ್ಪಳ ಜಿಲ್ಲೆ 5 ದಿನ ಸಂಪೂರ್ಣ ಲಾಕ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.