ETV Bharat / state

ಅಂಬೇಡ್ಕರ್ ಅಭಿಮಾನಿಗಳಿಂದ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣ

author img

By

Published : Sep 21, 2020, 9:52 AM IST

ಹಸನಾಪುರದಲ್ಲಿ ಸಾವಿರಾರು ಜನ ಅಂಬೇಡ್ಕರ್ ಅಭಿಮಾನಿಗಳು ಸೇರಿ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣಗೊಳಿಸಿದರು. ಜೊತೆಗೆ ಅಂಬೇಡ್ಕರ್ ಹಬ್ಬ ಎಂದು ವಿಶೇಷವಾಗಿ ಕಾರ್ಯಕ್ರಮ ಆಚರಿಸಿದರು.

Mahanayak serial banner unveiled
ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣ

ಸುರಪುರ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದ ಕಥಾ ಹಂದರದ ಮಹಾನಾಯಕ ಧಾರಾವಾಹಿ ಬೆಂಬಲಿಸಿ ಹಸನಾಪುರ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಬ್ಯಾನರ್​ ಹಾಕುವ ಮೂಲಕ ಧಾರಾವಾಹಿಗೆ ಬೆಂಬಲ ಸೂಚಿಸಲಾಯಿತು.

ಸಾವಿರಾರು ಜನ ಅಂಬೇಡ್ಕರ್​ ಅಭಿಮಾನಿಗಳು ಸೇರಿ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣಗೊಳಿಸುವ ಜೊತೆಗೆ ಅಂಬೇಡ್ಕರ್ ಹಬ್ಬ ಎಂದು ವಿಶೇಷವಾಗಿ ಕಾರ್ಯಕ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಾಲ್ಯದಿಂದಲೂ ಪಟ್ಟ ಕಷ್ಟಗಳು ಹಾಗೂ ಅವರ ಆದರ್ಶ ಜೀವನದ ಕುರಿತು ಮಹಾನಾಯಕ ಧಾರಾವಾಹಿಯ ಮೂಲಕ ತೋರಿಸುತ್ತಿರುವುದು ಸಂತೋಷದಾಯಕವಾಗಿದೆ.

ಪ್ರತಿಯೊಬ್ಬರೂ ಈ ಧಾರಾವಾಹಿಯನ್ನು ನೋಡುವ ಜೊತೆಗೆ ಅಂಬೇಡ್ಕರ್​ ಅವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ. ಅಲ್ಲದೆ ಈ ಧಾರಾವಾಹಿಯನ್ನು ಪ್ರಸಾರ ಮಾಡದಂತೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಕರೆ ಮಾಡುತ್ತಿರುವುದನ್ನು ಅಂಬೇಡ್ಕರ್ ಅಭಿಮಾನಿಗಳು ಖಂಡಿಸುವ ಜೊತೆಗೆ ಎಲ್ಲರೂ ರಾಘವೇಂದ್ರ ಹುಣಸೂರು ಅವರಿಗೆ ಬೆಂಬಲಿಸುವುದಾಗಿ ತಿಳಿಸಿದರು.

ಸುರಪುರ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದ ಕಥಾ ಹಂದರದ ಮಹಾನಾಯಕ ಧಾರಾವಾಹಿ ಬೆಂಬಲಿಸಿ ಹಸನಾಪುರ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಬ್ಯಾನರ್​ ಹಾಕುವ ಮೂಲಕ ಧಾರಾವಾಹಿಗೆ ಬೆಂಬಲ ಸೂಚಿಸಲಾಯಿತು.

ಸಾವಿರಾರು ಜನ ಅಂಬೇಡ್ಕರ್​ ಅಭಿಮಾನಿಗಳು ಸೇರಿ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣಗೊಳಿಸುವ ಜೊತೆಗೆ ಅಂಬೇಡ್ಕರ್ ಹಬ್ಬ ಎಂದು ವಿಶೇಷವಾಗಿ ಕಾರ್ಯಕ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಾಲ್ಯದಿಂದಲೂ ಪಟ್ಟ ಕಷ್ಟಗಳು ಹಾಗೂ ಅವರ ಆದರ್ಶ ಜೀವನದ ಕುರಿತು ಮಹಾನಾಯಕ ಧಾರಾವಾಹಿಯ ಮೂಲಕ ತೋರಿಸುತ್ತಿರುವುದು ಸಂತೋಷದಾಯಕವಾಗಿದೆ.

ಪ್ರತಿಯೊಬ್ಬರೂ ಈ ಧಾರಾವಾಹಿಯನ್ನು ನೋಡುವ ಜೊತೆಗೆ ಅಂಬೇಡ್ಕರ್​ ಅವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ. ಅಲ್ಲದೆ ಈ ಧಾರಾವಾಹಿಯನ್ನು ಪ್ರಸಾರ ಮಾಡದಂತೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಕರೆ ಮಾಡುತ್ತಿರುವುದನ್ನು ಅಂಬೇಡ್ಕರ್ ಅಭಿಮಾನಿಗಳು ಖಂಡಿಸುವ ಜೊತೆಗೆ ಎಲ್ಲರೂ ರಾಘವೇಂದ್ರ ಹುಣಸೂರು ಅವರಿಗೆ ಬೆಂಬಲಿಸುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.