ETV Bharat / state

ಕೃಷ್ಣಾನದಿಯಲ್ಲಿ ಪ್ರವಾಹ: ಮುಳುಗುವ ಭೀತಿಯಲ್ಲಿ ಛಾಯ ಭಗವತಿ ದೇಗುಲ

author img

By

Published : Aug 3, 2019, 7:36 PM IST

Updated : Aug 3, 2019, 8:35 PM IST

ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾನದಿಯ ತಟದಲ್ಲಿರುವ ಛಾಯ ಭಗವತಿ ದೇವಾಸ್ಥಾನವು ಮುಳುಗುವ ಹಂತಕ್ಕೆ ತಲುಪಿದೆ.

Chaya Bagavati Temple

ಯಾದಗಿರಿ: ಮಹಾರಾಷ್ಟ್ರದಲ್ಲಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾನದಿಯ ತಟದಲ್ಲಿರುವ ಛಾಯ ಭಗವತಿ ದೇವಾಸ್ಥಾನವು ಮುಳುಗುವ ಹಂತಕ್ಕೆ ತಲುಪಿದೆ.

ಮುಳುಗುವ ಹಂತದಲ್ಲಿ ಇರುವ ದೇವಸ್ಥಾನ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ನೀರು ಬಿಡಲಾಗಿದೆ. ಆದ್ದರಿಂದ ನದಿಯ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾರಣ ದೇವಸ್ಥಾನದ 18 ತೀರ್ಥ ಕುಂಡಗಳು ಮತ್ತು ಮೆಟ್ಟಿಲುಗಳು ಜಲಾವೃತ್ತಗೊಂಡಿದ್ದು, ದೇವಸ್ಥಾನದ ಗರ್ಭಗುಡಿಯೊಳಗೂ ನೀರು ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.

ಆಲಮಟ್ಟಿ ಜಲಾಶಯವು ತುಂಬುತ್ತಿದ್ದಂತೆ ಕೆಬಿಜೆಎನ್ಎಲ್ ಅಧಿಕಾರಿಗಳು ನಾರಾಯಣಪುರ ಬಸವ ಸಾಗರ ಜಲಾಶಯಕ್ಕೆ ನೀರು ಹರಿಸುತ್ತಿದ್ದಾರೆ. ಬಸವ ಸಾಗರ ಜಲಾಶಯದಿಂದ ಕೃಷ್ಣಾನದಿಗೆ 2,36,400 ಕ್ಯೂಸೆಕ್ ನೀರನ್ನು 24 ಗೇಟುಗಳ ಪೈಕಿ 21 ಗೇಟುಗಳಲ್ಲಿ ನೀರನ್ನು ಬಿಟ್ಟಿದ್ದಾರೆ. ನದಿಯ ತಟದಲ್ಲಿರುವ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.

ಯಾದಗಿರಿ: ಮಹಾರಾಷ್ಟ್ರದಲ್ಲಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾನದಿಯ ತಟದಲ್ಲಿರುವ ಛಾಯ ಭಗವತಿ ದೇವಾಸ್ಥಾನವು ಮುಳುಗುವ ಹಂತಕ್ಕೆ ತಲುಪಿದೆ.

ಮುಳುಗುವ ಹಂತದಲ್ಲಿ ಇರುವ ದೇವಸ್ಥಾನ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ನೀರು ಬಿಡಲಾಗಿದೆ. ಆದ್ದರಿಂದ ನದಿಯ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾರಣ ದೇವಸ್ಥಾನದ 18 ತೀರ್ಥ ಕುಂಡಗಳು ಮತ್ತು ಮೆಟ್ಟಿಲುಗಳು ಜಲಾವೃತ್ತಗೊಂಡಿದ್ದು, ದೇವಸ್ಥಾನದ ಗರ್ಭಗುಡಿಯೊಳಗೂ ನೀರು ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.

ಆಲಮಟ್ಟಿ ಜಲಾಶಯವು ತುಂಬುತ್ತಿದ್ದಂತೆ ಕೆಬಿಜೆಎನ್ಎಲ್ ಅಧಿಕಾರಿಗಳು ನಾರಾಯಣಪುರ ಬಸವ ಸಾಗರ ಜಲಾಶಯಕ್ಕೆ ನೀರು ಹರಿಸುತ್ತಿದ್ದಾರೆ. ಬಸವ ಸಾಗರ ಜಲಾಶಯದಿಂದ ಕೃಷ್ಣಾನದಿಗೆ 2,36,400 ಕ್ಯೂಸೆಕ್ ನೀರನ್ನು 24 ಗೇಟುಗಳ ಪೈಕಿ 21 ಗೇಟುಗಳಲ್ಲಿ ನೀರನ್ನು ಬಿಟ್ಟಿದ್ದಾರೆ. ನದಿಯ ತಟದಲ್ಲಿರುವ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.

Intro:ಯಾದಗಿರಿ : ಮಹಾರಾಷ್ಟ್ರದಲ್ಲಿ ಧಾರಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣ ನದಿಯ ತಟದಲ್ಲಿರುವ ಛಾಯ ಭಗವಾತಿ ದೇವಾಸ್ಥಾನವು ಮುಳುಗುವ ಸಾಧ್ಯತೆ ಹೆಚ್ಚಾಗಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದ ಕೃಷ್ಣ ನದಿ ತಟದಲ್ಲಿರುವ ಛಾಯ ಭಗವಾತಿ ದೇವಾಸ್ಥಾನ ನೀರಿನ ಪ್ರವಾಹದಿಂದ ಮುಳುಗುವ ಹಂತದಲ್ಲಿದೆ.

ಆಲಮಟ್ಟಿ ಜಲಾಶಯವು ತುಂಬುತ್ತಿದ್ದಂತೆ ಕೆಬಿಜೆಎನ್ಎಲ್ ಅಧಿಕಾರಿಗಳು ನಾರಾಯಣಪುರ ಬಸವ ಸಾಗರ ಜಲಾಶಯಕ್ಕೆ ನೀರು ಹರಿಸಲಾಗಿದೆ. ಈ ಹಿನ್ನೆಲೆ ಬಸವ ಸಾಗರ ಜಾಲಶಯವು ಹಾಲಿನಂತೆ ಉಕ್ಕಿ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪುತ್ತಿದೆ. .




Body:ಹೀಗಾಗಿ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ 2,36,400 ಕ್ಯೂಸೆಕ್ ನೀರನ್ನು 24 ಗೇಟುಗಳ ಪೈಕಿ 21 ಗೇಟುಗಳನ್ನು ಮುಖಾಂತರ ನೀರು ಹರಿಸಲಾಗಿದ್ದು ಕೃಷ್ಣ ನದಿಯ ತಟದಲ್ಲಿರುವ ಛಾಯ ಭಗಾವತಿ ದೇವಾಸ್ಥಾನದ 18 ತೀರ್ಥಕುಂಡಗಳು ಜಲಾವೃತ್ತವಾಗಿದೆ.




Conclusion:ಛಾಯ ದೇವಾಸ್ಥಾನ ಗರ್ಭಗುಡಿಯ ಮುಂಭಾಗದಲ್ಲಿರುವ ಸ್ಟೇಪ್ಗಳು ನೀರಿನಿಂದ ಆವೃತ್ತವಾಗಿದ್ದು ಗರ್ಭಗುಡಿಯೊಳಗೆ ನೀರು ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಕೃಷ್ಣ ನದಿಯ ತಟದಲ್ಲಿರುವ ಜನರಿಗೆ ಹೀಗಾಗಲೆ ಜಿಲ್ಲಾಡಲಿತ ಹೈ ಅಲರ್ಟ ಘೋಷಿಷಿದೆ.


Last Updated : Aug 3, 2019, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.