ETV Bharat / state

ಅಂದು ಸೋನು ಸೂದ್​, ಇಂದು ಮಲ್ಲರಡ್ಡಿಗೌಡ: ತ್ರಿವಳಿ ಮಕ್ಕಳ ತಾಯಿಗೆ ಸಹಾಯಹಸ್ತ

ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಬಡ ಕಾರ್ಮಿಕ ಮಹಿಳೆಗೆ ನಟ ಸೋನು ಸೂದ್ ಸಹಾಯ ಮಾಡಿದ್ರು. ಇದೀಗ ಈ ತಾಯಿಗೆ ಇಂಡಿಯನ್ ಗ್ಯಾಸ್ ವಿತರಕ ಮಾಲೀಕರಾದ ಮಲ್ಲರಡ್ಡಿಗೌಡ ಮಾಲಿಪಾಟೀಲ್ ಅವರು ಸಹಾಯ ಮಾಡಿದ್ದಾರೆ.

author img

By

Published : Sep 11, 2020, 6:22 PM IST

Updated : Sep 11, 2020, 8:15 PM IST

ತ್ರಿವಳಿ ಮಕ್ಕಳ ತಾಯಿಗೆ ಸಹಾಯಹಸ್ತ
ತ್ರಿವಳಿ ಮಕ್ಕಳ ತಾಯಿಗೆ ಸಹಾಯಹಸ್ತ

ಯಾದಗಿರಿ: ಕೆಲ ದಿನಗಳ ಹಿಂದೆ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಬಡ ಕಾರ್ಮಿಕ ಮಹಿಳೆ ಪದ್ಮಾ ನಾಗರಾಜ ಕುಟುಂಬಕ್ಕೆ, ಹತ್ತಿಕುಣಿ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ವಿತರಕ ಮಾಲೀಕರಾದ ಮಲ್ಲರಡ್ಡಿಗೌಡ ಮಾಲಿಪಾಟೀಲ್ ಅವರು ಅಡುಗೆ ಅನಿಲ ನೀಡಿ ಸಹಾಯ ಮಾಡಿದ್ದಾರೆ.

ತ್ರಿವಳಿ ಮಕ್ಕಳ ತಾಯಿಗೆ ಸಹಾಯಹಸ್ತ

ಈ ಸಂದರ್ಭದಲ್ಲಿ ಕುಟುಂಬಸ್ತರೊಂದಿಗೆ ಮಾತನಾಡಿದ ಮಾಲಿಪಾಟೀಲ್, ತಾಯಿ, ತ್ರಿವಳಿ ಗಂಡು ಮಕ್ಕಳ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ತೊಂದರೆ ಗಮನಿಸಿ ಸಮಾಜದಲ್ಲಿರುವ ಹಲವಾರು ವ್ಯಕ್ತಿಗಳು ಸಹಾಯ ಮಾಡುತ್ತಾರೆ. ಯಾವುದಕ್ಕೂ ಭಯ ಪಡಬೇಡಿ ಎಂದು ತಿಳಿದರು.

ತ್ರಿವಳಿ ಗಂಡು ಮಕ್ಕಳು
ತ್ರಿವಳಿ ಗಂಡು ಮಕ್ಕಳು

ಈಗಾಗಲೇ ತ್ರಿವಳಿ ಗಂಡು ಮಕ್ಕಳ ಜನ್ಮ ತಾಳಿದ ಈ ಕುಟುಂಬಕ್ಕೆ ಬಹುಭಾಷಾ ಖಳನಾಯಕ ನಟ ಸೋನು ಸೂದ್ ಕೂಡ ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಟ ಸೋನು ಸೂದ್ ನೀಡಿದ ಸಹಾಯ ಹಸ್ತ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿದ್ದಂತೆ ತ್ರಿವಳಿ ಮಕ್ಕಳ ಲಾಲನೆ ಪಾಲನೆಗೆ ಬಡ ಕುಟುಂಬಕ್ಕೆ ಸಹಾಯ ಮಾಡಲು ಸ್ಥಳೀಯರು ಕೂಡ ಮುಂದಾಗುತ್ತಿದ್ದಾರೆ.‌ಈ ಸಂದರ್ಭದಲ್ಲಿ ಸಿದ್ದು ನಾಯಕ ಹತ್ತಿಕುಣಿ, ಚಂದಪ್ಪ ರಾಮಸಮುದ್ರ, ಬಸುರಾಜ ಗೌಡಗೇರಿ, ಯಲ್ಲಾಲಿಂಗ ಶಂಕ್ರಪ್ಪನೋರ್, ಮಲ್ಲು ನಾಯಕ ರಾಮಸಮುದ್ರ, ಬಸು ನಾಯಕ ಸೇರಿದಂತೆ ಇತರರು ಇದ್ದರು.

ಸೋನು ಸೂದ್
ಸೋನು ಸೂದ್

ಯಾದಗಿರಿ: ಕೆಲ ದಿನಗಳ ಹಿಂದೆ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಬಡ ಕಾರ್ಮಿಕ ಮಹಿಳೆ ಪದ್ಮಾ ನಾಗರಾಜ ಕುಟುಂಬಕ್ಕೆ, ಹತ್ತಿಕುಣಿ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ವಿತರಕ ಮಾಲೀಕರಾದ ಮಲ್ಲರಡ್ಡಿಗೌಡ ಮಾಲಿಪಾಟೀಲ್ ಅವರು ಅಡುಗೆ ಅನಿಲ ನೀಡಿ ಸಹಾಯ ಮಾಡಿದ್ದಾರೆ.

ತ್ರಿವಳಿ ಮಕ್ಕಳ ತಾಯಿಗೆ ಸಹಾಯಹಸ್ತ

ಈ ಸಂದರ್ಭದಲ್ಲಿ ಕುಟುಂಬಸ್ತರೊಂದಿಗೆ ಮಾತನಾಡಿದ ಮಾಲಿಪಾಟೀಲ್, ತಾಯಿ, ತ್ರಿವಳಿ ಗಂಡು ಮಕ್ಕಳ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ತೊಂದರೆ ಗಮನಿಸಿ ಸಮಾಜದಲ್ಲಿರುವ ಹಲವಾರು ವ್ಯಕ್ತಿಗಳು ಸಹಾಯ ಮಾಡುತ್ತಾರೆ. ಯಾವುದಕ್ಕೂ ಭಯ ಪಡಬೇಡಿ ಎಂದು ತಿಳಿದರು.

ತ್ರಿವಳಿ ಗಂಡು ಮಕ್ಕಳು
ತ್ರಿವಳಿ ಗಂಡು ಮಕ್ಕಳು

ಈಗಾಗಲೇ ತ್ರಿವಳಿ ಗಂಡು ಮಕ್ಕಳ ಜನ್ಮ ತಾಳಿದ ಈ ಕುಟುಂಬಕ್ಕೆ ಬಹುಭಾಷಾ ಖಳನಾಯಕ ನಟ ಸೋನು ಸೂದ್ ಕೂಡ ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಟ ಸೋನು ಸೂದ್ ನೀಡಿದ ಸಹಾಯ ಹಸ್ತ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿದ್ದಂತೆ ತ್ರಿವಳಿ ಮಕ್ಕಳ ಲಾಲನೆ ಪಾಲನೆಗೆ ಬಡ ಕುಟುಂಬಕ್ಕೆ ಸಹಾಯ ಮಾಡಲು ಸ್ಥಳೀಯರು ಕೂಡ ಮುಂದಾಗುತ್ತಿದ್ದಾರೆ.‌ಈ ಸಂದರ್ಭದಲ್ಲಿ ಸಿದ್ದು ನಾಯಕ ಹತ್ತಿಕುಣಿ, ಚಂದಪ್ಪ ರಾಮಸಮುದ್ರ, ಬಸುರಾಜ ಗೌಡಗೇರಿ, ಯಲ್ಲಾಲಿಂಗ ಶಂಕ್ರಪ್ಪನೋರ್, ಮಲ್ಲು ನಾಯಕ ರಾಮಸಮುದ್ರ, ಬಸು ನಾಯಕ ಸೇರಿದಂತೆ ಇತರರು ಇದ್ದರು.

ಸೋನು ಸೂದ್
ಸೋನು ಸೂದ್
Last Updated : Sep 11, 2020, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.