ETV Bharat / state

ಭೀಮಾ ನದಿಗೆ ಈಜಲು ತೆರಳಿದ್ದ ನಾಲ್ವರು ಯುವಕರು ನಾಪತ್ತೆ - ಯಾದಗಿರಿ ಸುದ್ದಿ

ಘಟನಾ ಸ್ಥಳಕ್ಕೆ ಎಸ್​ಪಿ ಋಷಿಕೇಶ್ ಸೋನವಣೆ, ಎಡಿಸಿ ಪ್ರಕಾಶ್ ರಜಪೂತ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಚುರುಕುಗೊಂಡಿದೆ..

Four youths have gone missing to swim in the river Bhima
ಭೀಮಾ ನದಿಗೆ ಈಜಲು ತೆರಳಿದ್ದ ನಾಲ್ಕು ಯುವಕರು ನಾಪತ್ತೆ
author img

By

Published : Sep 6, 2020, 7:45 PM IST

ಯಾದಗಿರಿ : ಭೀಮಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನಾಪತ್ತೆ‌ಯಾಗಿರುವ ಘಟನೆ ಯಾದಗಿರಿ ಹೊರವಲಯದ ಗುರುಸಣಗಿ ಬ್ರಿಡ್ಜ್ ಬಳಿ‌ ನಡೆದಿದೆ.

ಭೀಮಾ ನದಿಗೆ ಈಜಲು ತೆರಳಿದ್ದ ನಾಲ್ವರು ಯುವಕರು ನಾಪತ್ತೆ

ಯುವಕರ ಗುಂಪೊಂದು ಗುರಸಣಗಿ ಬ್ರಿಡ್ಜ್ ಬಳಿಯ ಭೀಮಾ ನದಿಗೆ ಈಜಲು ತೆರಳಿತ್ತು. ಈಜಲು ಹೋದ ಐವರಲ್ಲಿ ಎಂ ಡಿ ಅಬ್ದುಲ್ ಎಂಬಾತನನ್ನು ನದಿ ದಡದಲ್ಲಿ ನಿಲ್ಲಿಸಿ, ಉಳಿದ ನಾಲ್ವರು ನದಿಗೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಆಯತಪ್ಪಿ ಯಾದಗಿರಿಯ ಅಮಾನ್ (16), ಅಯಾನ್ (16), ರೆಹಮಾನ್ (16) ಹಾಗೂ ಕಲಬುರಗಿ ಮೂಲದ ರೆಹಮಾನ್ (15) ಎಂಬುವರು ಮುಳುಗಿದ್ದಾರೆ ಎನ್ನಲಾಗಿದೆ‌.

ಘಟನಾ ಸ್ಥಳಕ್ಕೆ ಎಸ್​ಪಿ ಋಷಿಕೇಶ್ ಸೋನವಣೆ, ಎಡಿಸಿ ಪ್ರಕಾಶ್ ರಜಪೂತ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಚುರುಕುಗೊಂಡಿದೆ.

ಯಾದಗಿರಿ : ಭೀಮಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನಾಪತ್ತೆ‌ಯಾಗಿರುವ ಘಟನೆ ಯಾದಗಿರಿ ಹೊರವಲಯದ ಗುರುಸಣಗಿ ಬ್ರಿಡ್ಜ್ ಬಳಿ‌ ನಡೆದಿದೆ.

ಭೀಮಾ ನದಿಗೆ ಈಜಲು ತೆರಳಿದ್ದ ನಾಲ್ವರು ಯುವಕರು ನಾಪತ್ತೆ

ಯುವಕರ ಗುಂಪೊಂದು ಗುರಸಣಗಿ ಬ್ರಿಡ್ಜ್ ಬಳಿಯ ಭೀಮಾ ನದಿಗೆ ಈಜಲು ತೆರಳಿತ್ತು. ಈಜಲು ಹೋದ ಐವರಲ್ಲಿ ಎಂ ಡಿ ಅಬ್ದುಲ್ ಎಂಬಾತನನ್ನು ನದಿ ದಡದಲ್ಲಿ ನಿಲ್ಲಿಸಿ, ಉಳಿದ ನಾಲ್ವರು ನದಿಗೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಆಯತಪ್ಪಿ ಯಾದಗಿರಿಯ ಅಮಾನ್ (16), ಅಯಾನ್ (16), ರೆಹಮಾನ್ (16) ಹಾಗೂ ಕಲಬುರಗಿ ಮೂಲದ ರೆಹಮಾನ್ (15) ಎಂಬುವರು ಮುಳುಗಿದ್ದಾರೆ ಎನ್ನಲಾಗಿದೆ‌.

ಘಟನಾ ಸ್ಥಳಕ್ಕೆ ಎಸ್​ಪಿ ಋಷಿಕೇಶ್ ಸೋನವಣೆ, ಎಡಿಸಿ ಪ್ರಕಾಶ್ ರಜಪೂತ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಚುರುಕುಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.