ETV Bharat / state

ಬೆಂಗಳೂರಿನಿಂದ ಊರಿಗೆ ಬಂದ ಯುವಕನಿಗೆ ಕೊರೊನಾ... ಮದುವೆಗೆ ಅಡ್ಡಿಯಾಯ್ತು ಮಹಾಮಾರಿ!

author img

By

Published : Jul 8, 2020, 7:48 PM IST

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಯುವಕನೊಬ್ಬ ವಿವಾಹವಾಗುವ ಹಿನ್ನೆಲೆ ಬೆಂಗಳೂರಿನಿಂದ ತನ್ನ ಗ್ರಾಮಕ್ಕೆ ಮರಳಿದ್ದು ದುರದೃಷ್ಟವಶಾತ್​​​ ಆತನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

yadgiri
ಯಾದಗಿರಿ

ಯಾದಗಿರಿ: ಬೆಂಗಳೂರಿನಿಂದ ಮದುವೆ ಮಾಡಿಕೊಳ್ಳಲು ಜಿಲ್ಲೆಗೆ ಆಗಮಿಸಿದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ತಾತ್ಕಾಲಿಕವಾಗಿ ಮದುವೆಯನ್ನು ಮುಂದೂಡಲಾಗಿದೆ.

ಮದುವೆ ಮಾಡಿಕೊಳ್ಳಲು ಊರಿಗೆ ಬಂದ ಯುವಕನಿಗೆ ವಕ್ಕರಿಸಿತು ಮಹಾಮಾರಿ

ಜಿಲ್ಲೆಯ ಶಹಾಪುರ ತಾಲೂಕಿನ ಗ್ರಾಮವೊಂದರ ಯುವಕ ವಿವಾಹವಾಗುವ ಹಿನ್ನೆಲೆ ಕಳೆದ ಜೂನ್​ 29 ರಂದು ತನ್ನ ಗ್ರಾಮಕ್ಕೆ ಬಂದಿದ್ದ. ಅಲ್ಲದೇ ಈ ತಿಂಗಳ 13 ರಂದು ಆತನ ಮದುವೆ ನಿಶ್ಚಯವಾಗಿತ್ತು. ಆದರೆ ಯುವಕ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದುದರ ಹಿನ್ನೆಲೆ ಸ್ವಯಂ ಪ್ರೇರಿತನಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾನೆ. ಇದೀಗ ವರದಿ ಪಾಸಿಟಿವ್​​ ಬಂದಿದೆ.

ಈಗಾಗಲೇ ಯುವಕ ತನ್ನ ಮದುವೆ ಕಾರ್ಯದ ನಿಮಿತ್ತ ಗ್ರಾಮ ಸೇರಿದಂತೆ ಹಲೆವೆಡೆ ಓಡಾಡಿದ್ದರಿಂದಾಗಿ ಜನರಲ್ಲಿ ಕರೋನಾ ಭೀತಿ ಎದುರಾಗಿದೆ. ಸದ್ಯ ಸೋಂಕು ತಗುಲಿದ ಯುವಕನನ್ನ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಬಂದಳ್ಳಿ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಿದ್ದಾರೆ.

ಯಾದಗಿರಿ: ಬೆಂಗಳೂರಿನಿಂದ ಮದುವೆ ಮಾಡಿಕೊಳ್ಳಲು ಜಿಲ್ಲೆಗೆ ಆಗಮಿಸಿದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ತಾತ್ಕಾಲಿಕವಾಗಿ ಮದುವೆಯನ್ನು ಮುಂದೂಡಲಾಗಿದೆ.

ಮದುವೆ ಮಾಡಿಕೊಳ್ಳಲು ಊರಿಗೆ ಬಂದ ಯುವಕನಿಗೆ ವಕ್ಕರಿಸಿತು ಮಹಾಮಾರಿ

ಜಿಲ್ಲೆಯ ಶಹಾಪುರ ತಾಲೂಕಿನ ಗ್ರಾಮವೊಂದರ ಯುವಕ ವಿವಾಹವಾಗುವ ಹಿನ್ನೆಲೆ ಕಳೆದ ಜೂನ್​ 29 ರಂದು ತನ್ನ ಗ್ರಾಮಕ್ಕೆ ಬಂದಿದ್ದ. ಅಲ್ಲದೇ ಈ ತಿಂಗಳ 13 ರಂದು ಆತನ ಮದುವೆ ನಿಶ್ಚಯವಾಗಿತ್ತು. ಆದರೆ ಯುವಕ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದುದರ ಹಿನ್ನೆಲೆ ಸ್ವಯಂ ಪ್ರೇರಿತನಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾನೆ. ಇದೀಗ ವರದಿ ಪಾಸಿಟಿವ್​​ ಬಂದಿದೆ.

ಈಗಾಗಲೇ ಯುವಕ ತನ್ನ ಮದುವೆ ಕಾರ್ಯದ ನಿಮಿತ್ತ ಗ್ರಾಮ ಸೇರಿದಂತೆ ಹಲೆವೆಡೆ ಓಡಾಡಿದ್ದರಿಂದಾಗಿ ಜನರಲ್ಲಿ ಕರೋನಾ ಭೀತಿ ಎದುರಾಗಿದೆ. ಸದ್ಯ ಸೋಂಕು ತಗುಲಿದ ಯುವಕನನ್ನ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಬಂದಳ್ಳಿ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.