ETV Bharat / state

ಯಾದಗಿರಿಯಲ್ಲಿ ಭೀಕರ ಬಸ್​​ ಅಪಘಾತ: ಚಾಲಕ ಸೇರಿ ಸ್ಥಳದಲ್ಲೇ ಮೂವರ ಸಾವು - ಭೀಕರ ಬಸ್​​ ಅಪಘಾತ

ಯಾದಗಿರಿ ಜಿಲ್ಲೆಯ ಶಹಾಪುರದಿಂದ ಕೆಂಭಾವಿ ಮಾರ್ಗವಾಗಿ ಚಲಿಸುತ್ತಿದ್ದ ಕೆಎಸ್ಆರ್​​ಟಿಸಿ ಬಸ್​​ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.

ಭೀಕರ ಬಸ್​​ ಅಪಘಾತ
author img

By

Published : Aug 30, 2019, 11:56 PM IST

ಯಾದಗಿರಿ: ಭೀಕರ ಬಸ್ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಡೆದಿದೆ.

ಶಹಾಪುರದಿಂದ ಕೆಂಭಾವಿ ಮಾರ್ಗವಾಗಿ ಸುರಪುರ ತಾಲೂಕಿನ ನಡಿಹಾಳ‌ ತಾಂಡ ಹಾಗೂ ಏವೂರ ಕ್ರಾಸ್ ಮಧ್ಯೆ ಚಲಿಸುತ್ತಿದ್ದ ಕೆಎಸ್ಆರ್​​ಟಿಸಿ ಬಸ್​ನ ಎಕ್ಸೆಲ್ ಕಟ್ಟಾಗಿ, ಬಸ್​ ಪಲ್ಟಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ.

ಯಾದಗಿರಿಯಲ್ಲಿ ಭೀಕರ ಬಸ್​​ ಅಪಘಾತ

ಘಟನೆಯಲ್ಲಿ ಬಸ್​​ ಚಾಲಕ ದವಾಲಸಾಬ್​, ಓರ್ವ ಮಹಿಳೆ ಪದ್ಮಮ್ಮ, ಓರ್ವ ವೃದ್ಧ ಕೆಂಚಪ್ಪ ಸಾವನ್ನಪ್ಪಿದ್ದು, ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಬಸ್ ಹಳೆಯದಾಗಿದ್ದು, ರಿಪೇರಿ ಮಾಡಲಾಗಿತ್ತು. ಶಹಾಪುರ ಬಸ್ ಡಿಪೋ ಮ್ಯಾನೇಜರ್ ಹಳೆಯ ಗಾಡಿಗಳನ್ನು ರಿಪೇರಿ ಮಾಡಿ ಸಂಚಾರಕ್ಕೆ ಬಿಟ್ಟಿದ್ದಾರೆ ಎಂದು ಸ್ಥಳೀಯರು ಹಾಗೂ ಗೌಪ್ಯ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ: ಭೀಕರ ಬಸ್ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಡೆದಿದೆ.

ಶಹಾಪುರದಿಂದ ಕೆಂಭಾವಿ ಮಾರ್ಗವಾಗಿ ಸುರಪುರ ತಾಲೂಕಿನ ನಡಿಹಾಳ‌ ತಾಂಡ ಹಾಗೂ ಏವೂರ ಕ್ರಾಸ್ ಮಧ್ಯೆ ಚಲಿಸುತ್ತಿದ್ದ ಕೆಎಸ್ಆರ್​​ಟಿಸಿ ಬಸ್​ನ ಎಕ್ಸೆಲ್ ಕಟ್ಟಾಗಿ, ಬಸ್​ ಪಲ್ಟಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ.

ಯಾದಗಿರಿಯಲ್ಲಿ ಭೀಕರ ಬಸ್​​ ಅಪಘಾತ

ಘಟನೆಯಲ್ಲಿ ಬಸ್​​ ಚಾಲಕ ದವಾಲಸಾಬ್​, ಓರ್ವ ಮಹಿಳೆ ಪದ್ಮಮ್ಮ, ಓರ್ವ ವೃದ್ಧ ಕೆಂಚಪ್ಪ ಸಾವನ್ನಪ್ಪಿದ್ದು, ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಬಸ್ ಹಳೆಯದಾಗಿದ್ದು, ರಿಪೇರಿ ಮಾಡಲಾಗಿತ್ತು. ಶಹಾಪುರ ಬಸ್ ಡಿಪೋ ಮ್ಯಾನೇಜರ್ ಹಳೆಯ ಗಾಡಿಗಳನ್ನು ರಿಪೇರಿ ಮಾಡಿ ಸಂಚಾರಕ್ಕೆ ಬಿಟ್ಟಿದ್ದಾರೆ ಎಂದು ಸ್ಥಳೀಯರು ಹಾಗೂ ಗೌಪ್ಯ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಯಾದಗಿರಿ: ಭೀಕರ ಬಸ್ ಅಪಘಾತದಿಂದ ಸ್ಥಳದಲ್ಲಿ ಮೂರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುರಪೂರ ತಾಲೂಕಿನ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುರಪುರ ತಾಲೂಕಿನ ನಡಿಹಾಳ‌ ತಾಂಡ ಹಾಗೂ ಏವೂರ ಕ್ರಾಸ್ ಮಧ್ಯದಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ ಮೂರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ಶಹಾಪುರದಿಂದ ಕೆಂಭಾವಿ ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಅಚಾನಾಕಾಗಿ ಜಾಯಿಂಟ್ ಎಕ್ಸೆಲ್ ಕಟಾಗಿ ಪಲ್ಡಿ ಹೊಡೆದ‌‌ ಪರಿಣಾಮ ಸ್ಥಳದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಚಾಲಕ ಸೇರಿದಂತೆ ಮೂರು ಜನರು ಸಾವನ್ನಪ್ಪಿದ್ದಾರೆ.





Body:ಕೆಎಸ್ಆರ್ ಟಿಸಿ ಬಸ್ ಶಹಾಪುರ ಡಿಪೋಕ್ಕೆ ಸೇರಲಾಗಿದ್ದು ಚಾಲಕ ದವಾಲಸಾಬ , ಓರ್ವ ಮಹೀಳೆ ಪದ್ದಮ್ಮ, ಓರ್ವ ವೃದ್ದ ಕೆಂಚಪ್ಪ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಳೆಯದಾಗಿದ್ದು, ರಿಪೇರಿ ಮಾಡಲಾಗಿತ್ತು. ಶಹಾಪುರ ಬಸ್ ಡಿಪೋ ಮ್ಯಾನೇಜರ್ ಹಳೆಯ ರಿಪೇರಿ ಗಾಡಿಗಳನ್ನು ಸಂಚಾರಕ್ಕೆ ಬಿಟ್ಟಿದ್ದಾರೆ ಎಂದು ಸ್ಥಳೀಯರು ಹಾಗೂ ಗೌಪ್ಯ ಮೂಲಗಳಿಂದ ತಿಳಿದುಬಂದಿದೆ.



Conclusion:ಅಪಘಾತದಲ್ಲಿ ಗಾಯಗೊಂಡವರನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ETV Bharat Logo

Copyright © 2025 Ushodaya Enterprises Pvt. Ltd., All Rights Reserved.