ವಿಜಯಪುರ: ಮೊಬೈಲ್ ಚಾರ್ಜರ್ ವೈರ್ನಿಂದ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದ ಮಲತಾಯಿಯನ್ನು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಮಿಂಚನಾಳ ತಾಂಡಾದಲ್ಲಿ 5 ವರ್ಷದ ಗಂಡು ಮಗುವನ್ನು ಮೊಬೈಲ್ ಚಾರ್ಚರ್ ವೈರ್ ಮೂಲಕ ಕತ್ತು ಹಿಸುಕಿ ಕ್ರೂರಿ ಮಲತಾಯಿ ಕೊಲೆ ಮಾಡಿದ್ದಳು. ಅಲ್ಲದೇ, 3 ವರ್ಷದ ಬಾಲಕನನ್ನು ಸಹ ಹತ್ಯೆ ಮಾಡಲು ಯತ್ನಿಸಿದ್ದಳು. ನಿನ್ನೆಯೇ ವಶಕ್ಕೆ ಪಡೆದಿದ್ದ ಮಹಿಳೆಯ ವಿಚಾರಣೆ ನಡೆಸಿದ ಪೊಲೀಸರು ಇಂದು ಬಂಧನ ಮಾಡಿದ್ದಾರೆ. ಸವಿತಾ ವಿನೋದ್ ಚವ್ಹಾಣ್ ಬಂಧಿತ ಮಲತಾಯಿ.
ಓದಿ-ಮದುವೆಯಾದ ಎರಡೇ ತಿಂಗಳಿಗೆ 5 ವರ್ಷದ ಬಾಲಕನನ್ನು ಕೊಂದ ಮಲತಾಯಿ
ತನ್ನ ಸಂಸಾರಕ್ಕೆ ಮೊದಲನೇ ಹೆಂಡತಿಯ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ಸಮೀತ್ ಹಾಗೂ ಸಂಪತ್ ಅನ್ನು ಹತ್ಯೆ ಮಾಡಲು ಸಂಚು ರೂಪಿಸಿ ಸಮೀತನನ್ನು ಕೊಲೆ ಮಾಡಿ, ನಂತರ ಸಂಪತನನ್ನು ಸಹ ಕೊಲೆ ಮಾಡಲು ಯತ್ನಿಸಿದ್ದಳು. ಸದ್ಯ ಬಾಲಕ ಸಂಪತ ಜೀವನ್ಮರಣ ಹೊರಾಟ ನಡೆಸುತ್ತಿದ್ದಾನೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.