ETV Bharat / state

ಉದ್ಯೋಗ ಖಾತ್ರಿ ಯೋಜನೆಯಡಿ 66 ಮಾನವ ದಿನ ಸೃಜನೆ: ಗೋವಿಂದ ರೆಡ್ಡಿ

author img

By

Published : Jul 2, 2020, 11:05 AM IST

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜೂನ್ 30 ರಂದು ಒಂದೇ ದಿನದಲ್ಲಿ 66.670 ಮಾನವ ದಿನ ಸೃಜನೆ ಮಾಡುವ ಮೂಲಕ ಸಾಧನೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ತಿಳಿಸಿದರು.

Vijayapura
Vijayapura

ವಿಜಯಪುರ : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜೂನ್ 30 ರಂದು ಒಂದೇ ದಿನದಲ್ಲಿ 66.670 ಮಾನವ ದಿನ ಸೃಜನೆ ಮಾಡುವ ಮೂಲಕ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೊನವಾಡ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 66.670 ಮಾನವ ದಿನ ಸೃಜನೆ ಮಾಡಿರುವುದು ಐತಿಹಾಸಿಕ ದಾಖಲೆ. ಜಿಲ್ಲೆಯಲ್ಲಿ ಒಂದು ವರ್ಷಕ್ಕೆ 50 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಲಾಗಿದೆ. ಒಂದೇ ದಿನದಲ್ಲಿ ಮೇಲಿನ ಸಾಧನೆ ಮಾಡಲಾಗಿದ್ದು, ಜೂನ್ ತಿಂಗಳ ಒಂದರಲ್ಲೇ 5.72 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಿ, 8.57 ಲಕ್ಷ ಮಾನವ ದಿನ ಸೃಜನೆಯ ಸಾಧನೆ ಮಾಡಿ ಶೇ. 150 ರಷ್ಟು ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ -19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ಈ ಯೋಜನೆಯಡಿಯಲ್ಲಿ ಕಡಿಮೆ ಪ್ರಗತಿ ಸಾಧಿಸಿದ್ದರಿಂದ ಇದನ್ನು ಸರಿದೂಗಿಸಲು ಎಪ್ರಿಲ್‌ ದಿಂದ ಜೂನ್ ಅಂತ್ಯಕ್ಕೆ 16 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಿ 14. 38 ಲಕ್ಷ ರಷ್ಟು ಮಾನವ ದಿನ ಸೃಜನೆ ಮಾಡಿ ಶೇ 90 ರಷ್ಟು ಮಾನವ ದಿನ ಸೃಜಿಸಿ ಸಾಧನೆ ಮಾಡಿದೆ ಎಂದು ಅವರು ತಿಳಿಸಿದರು.

ಕಳೆದ ಏಪ್ರಿಲ್‌ ಒಂದರಿಂದ ಈವರೆಗೆ 12,228 ಹೊಸ ಉದ್ಯೋಗ ಚೀಟಿಗಳನ್ನು ಸಹ ವಿತರಿಸಲಾಗಿದೆ. ಹೊನವಾಡದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 342 ಕಾರ್ಮಿಕರು ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ತಾವು ಭೇಟಿ ನೀಡಿ ಪರಿಶೀಲನೆ ಸಹ ನಡೆಸಲಾಯಿತೆಂದು ಅವರು ತಿಳಿಸಿದರು.

ವಿಜಯಪುರ : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜೂನ್ 30 ರಂದು ಒಂದೇ ದಿನದಲ್ಲಿ 66.670 ಮಾನವ ದಿನ ಸೃಜನೆ ಮಾಡುವ ಮೂಲಕ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೊನವಾಡ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 66.670 ಮಾನವ ದಿನ ಸೃಜನೆ ಮಾಡಿರುವುದು ಐತಿಹಾಸಿಕ ದಾಖಲೆ. ಜಿಲ್ಲೆಯಲ್ಲಿ ಒಂದು ವರ್ಷಕ್ಕೆ 50 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಲಾಗಿದೆ. ಒಂದೇ ದಿನದಲ್ಲಿ ಮೇಲಿನ ಸಾಧನೆ ಮಾಡಲಾಗಿದ್ದು, ಜೂನ್ ತಿಂಗಳ ಒಂದರಲ್ಲೇ 5.72 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಿ, 8.57 ಲಕ್ಷ ಮಾನವ ದಿನ ಸೃಜನೆಯ ಸಾಧನೆ ಮಾಡಿ ಶೇ. 150 ರಷ್ಟು ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ -19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ಈ ಯೋಜನೆಯಡಿಯಲ್ಲಿ ಕಡಿಮೆ ಪ್ರಗತಿ ಸಾಧಿಸಿದ್ದರಿಂದ ಇದನ್ನು ಸರಿದೂಗಿಸಲು ಎಪ್ರಿಲ್‌ ದಿಂದ ಜೂನ್ ಅಂತ್ಯಕ್ಕೆ 16 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಿ 14. 38 ಲಕ್ಷ ರಷ್ಟು ಮಾನವ ದಿನ ಸೃಜನೆ ಮಾಡಿ ಶೇ 90 ರಷ್ಟು ಮಾನವ ದಿನ ಸೃಜಿಸಿ ಸಾಧನೆ ಮಾಡಿದೆ ಎಂದು ಅವರು ತಿಳಿಸಿದರು.

ಕಳೆದ ಏಪ್ರಿಲ್‌ ಒಂದರಿಂದ ಈವರೆಗೆ 12,228 ಹೊಸ ಉದ್ಯೋಗ ಚೀಟಿಗಳನ್ನು ಸಹ ವಿತರಿಸಲಾಗಿದೆ. ಹೊನವಾಡದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 342 ಕಾರ್ಮಿಕರು ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ತಾವು ಭೇಟಿ ನೀಡಿ ಪರಿಶೀಲನೆ ಸಹ ನಡೆಸಲಾಯಿತೆಂದು ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.