ETV Bharat / state

ನನ್ನ ತಂಟೆಗೆ ಬಂದ್ರೆ ಹಣೆಗೆ ಗುಂಡಿಟ್ಟು ಹೊಡಿತಿನಿ: ಬಾಗಪ್ಪ ಹರಿಜನ

author img

By

Published : Aug 18, 2019, 10:44 AM IST

ನನ್ನ ಉಸಾಬರಿಗೆ ಯಾರಾದರೂ ಬಂದರೆ 24 ಗಂಟೆಗಳಲ್ಲಿಯೇ ಬಂದೂಕು ಹಿಡಿಯುತ್ತೇನೆ. ಮನೆಗೆ ಹೊಕ್ಕು, ಹಣೆಗೆ ಹಚ್ಚಿ ಹೊಡೆಯುತ್ತೇನೆ ಎಂದು ಭೀಮಾತೀರದ ಹಂತಕನ ಬಲಗೈ ಬಂಟ ಬಾಗಪ್ಪ ಹರಿಜನ ಗುಡುಗಿದ್ದಾನೆ.

ಬಾಗಪ್ಪ ಹರಿಜನ

ವಿಜಯಪುರ: ಇಷ್ಟು ದಿನ ತಣ್ಣಗಿದ್ದ ಭೀಮಾತೀರದಲ್ಲೀಗ ಮತ್ತೆ ರಕ್ತ ಹರಿಯುತ್ತಾ ಎಂಬ ಅನುಮಾನ ಜನರಲ್ಲಿ ಶುರುವಾಗಿದೆ. ನನ್ನ ಪಾಡಿಗೆ ನಾನಿರುತ್ತೇನೆ. ಆದರೆ, ನನ್ನ ಕೆದಕಲು ಬಂದರೆ ಹಣೆಗೆ ಬಂದೂಕು‌ ಇಟ್ಟು ಹೋಡಿತಿನಿ ಎಂದು ಭೀಮಾತೀರದ ಹಂತಕನ ಬಲಗೈ ಬಂಟ ಬಾಗಪ್ಪ ಹರಿಜನ ತನ್ನ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾನೆ.

ಪ್ರಕರಣವೊಂದರ ವಿಚಾರಣೆಗಾಗಿ ಕೋರ್ಟ್​​ಗೆ ಬಂದಿದ್ದ ಬಾಗಪ್ಪ ಹರಿಜನ್, ನನ್ನ ಉಸಾಬರಿಗೆ ಯಾರಾದರು ಬಂದರೆ 24 ಗಂಟೆಗಳಲ್ಲಿಯೇ ಬಂದೂಕು ಹಿಡಿಯುತ್ತೇನೆ. ಮನೆಗೆ ಹೊಕ್ಕು, ಹಣೆಗೆ ಹಚ್ಚಿ ಹೊಡೆಯುತ್ತೇನೆ ಎಂದು ಗುಡುಗಿದ್ದಾನೆ. ಭೀಮಾತೀರದ ಹಂತಕನಾಗಿದ್ದ, ಪೊಲೀಸ್ ಎನಕೌಂಟರ್​​​ಗೆ ಬಲಿಯಾದ ಚಂದಪ್ಪ ಹರಿಜನ ಸಂಬಂಧಿಕರು ನನಗೆ ಕಿರುಕುಳ ಕೊಡುತ್ತಿದ್ದಾರೆ. ನಾನೂ ಕಮಜೋರ್ ಅಲ್ಲ ಎಂದು ಚಂದಪ್ಪ ಹರಿಜನ ಸಂಬಂಧಿಕರಿಗೆ ಎಚ್ಚರಿಕೆ ‌ನೀಡಿದ್ದಾನೆ.‌

ಬಾಗಪ್ಪ ಹರಿಜನ ಪ್ರತಿಕ್ರಿಯೆ

ಆಸ್ತಿ ವಿಚಾರವಾಗಿ ಚಂದಪ್ಪನ ಕುಟುಂಬಸ್ಥರು ಹಾಗೂ ನನ್ನ ಮಧ್ಯೆ ದ್ವೇಷ ಉಂಟಾಗಿದೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲಾ ಸುಳ್ಳು. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾನೆ. ಇನ್ನು ಜಿಲ್ಲೆಯಲ್ಲಿ ಬಾಗಪ್ಪನ‌ ಹೆಸರಿನಲ್ಲಿ ವಸೂಲಿ‌ ದಂಧೆ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಬಾಗಪ್ಪ ಹರಿಜನ, ನನ್ನ ಹೆಸರು ಹೇಳಿ ಕೆಲವರು ವಸೂಲಿ ದಂಧೆ ಮಾಡುತ್ತಿದ್ದಾರೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ.


ಇನ್ನು ತನ್ನ ಹೆಸರಲ್ಲಿ ವಸೂಲಿ ನಡೆಯುತ್ತಿದೆ ಎಂದು ಬಾಗಪ್ಪ ಮಾಡಿದ್ದ ಆರೋಪದ ಬಗ್ಗೆ ಕಿರಣ್ ಸ್ಪಷ್ಟನೆ ನೀಡಿದ್ದಾನೆ. ಬಾಗಪ್ಪ ಮಾಡಿರುವ ಆರೋಪ ಸುಳ್ಳು. ತಾನು ಬಾಗಪ್ಪನ ಸಹಚರ ಎಂದು ಹೇಳಿಕೊಂಡು ಹಣ ಸುಲಿಗೆ ಮಾಡಿಲ್ಲ ಎಂದು ಕಿರಣ್ ಹೇಳಿದ್ದಾನೆ.

ವಿಜಯಪುರ: ಇಷ್ಟು ದಿನ ತಣ್ಣಗಿದ್ದ ಭೀಮಾತೀರದಲ್ಲೀಗ ಮತ್ತೆ ರಕ್ತ ಹರಿಯುತ್ತಾ ಎಂಬ ಅನುಮಾನ ಜನರಲ್ಲಿ ಶುರುವಾಗಿದೆ. ನನ್ನ ಪಾಡಿಗೆ ನಾನಿರುತ್ತೇನೆ. ಆದರೆ, ನನ್ನ ಕೆದಕಲು ಬಂದರೆ ಹಣೆಗೆ ಬಂದೂಕು‌ ಇಟ್ಟು ಹೋಡಿತಿನಿ ಎಂದು ಭೀಮಾತೀರದ ಹಂತಕನ ಬಲಗೈ ಬಂಟ ಬಾಗಪ್ಪ ಹರಿಜನ ತನ್ನ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾನೆ.

ಪ್ರಕರಣವೊಂದರ ವಿಚಾರಣೆಗಾಗಿ ಕೋರ್ಟ್​​ಗೆ ಬಂದಿದ್ದ ಬಾಗಪ್ಪ ಹರಿಜನ್, ನನ್ನ ಉಸಾಬರಿಗೆ ಯಾರಾದರು ಬಂದರೆ 24 ಗಂಟೆಗಳಲ್ಲಿಯೇ ಬಂದೂಕು ಹಿಡಿಯುತ್ತೇನೆ. ಮನೆಗೆ ಹೊಕ್ಕು, ಹಣೆಗೆ ಹಚ್ಚಿ ಹೊಡೆಯುತ್ತೇನೆ ಎಂದು ಗುಡುಗಿದ್ದಾನೆ. ಭೀಮಾತೀರದ ಹಂತಕನಾಗಿದ್ದ, ಪೊಲೀಸ್ ಎನಕೌಂಟರ್​​​ಗೆ ಬಲಿಯಾದ ಚಂದಪ್ಪ ಹರಿಜನ ಸಂಬಂಧಿಕರು ನನಗೆ ಕಿರುಕುಳ ಕೊಡುತ್ತಿದ್ದಾರೆ. ನಾನೂ ಕಮಜೋರ್ ಅಲ್ಲ ಎಂದು ಚಂದಪ್ಪ ಹರಿಜನ ಸಂಬಂಧಿಕರಿಗೆ ಎಚ್ಚರಿಕೆ ‌ನೀಡಿದ್ದಾನೆ.‌

ಬಾಗಪ್ಪ ಹರಿಜನ ಪ್ರತಿಕ್ರಿಯೆ

ಆಸ್ತಿ ವಿಚಾರವಾಗಿ ಚಂದಪ್ಪನ ಕುಟುಂಬಸ್ಥರು ಹಾಗೂ ನನ್ನ ಮಧ್ಯೆ ದ್ವೇಷ ಉಂಟಾಗಿದೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲಾ ಸುಳ್ಳು. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾನೆ. ಇನ್ನು ಜಿಲ್ಲೆಯಲ್ಲಿ ಬಾಗಪ್ಪನ‌ ಹೆಸರಿನಲ್ಲಿ ವಸೂಲಿ‌ ದಂಧೆ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಬಾಗಪ್ಪ ಹರಿಜನ, ನನ್ನ ಹೆಸರು ಹೇಳಿ ಕೆಲವರು ವಸೂಲಿ ದಂಧೆ ಮಾಡುತ್ತಿದ್ದಾರೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ.


ಇನ್ನು ತನ್ನ ಹೆಸರಲ್ಲಿ ವಸೂಲಿ ನಡೆಯುತ್ತಿದೆ ಎಂದು ಬಾಗಪ್ಪ ಮಾಡಿದ್ದ ಆರೋಪದ ಬಗ್ಗೆ ಕಿರಣ್ ಸ್ಪಷ್ಟನೆ ನೀಡಿದ್ದಾನೆ. ಬಾಗಪ್ಪ ಮಾಡಿರುವ ಆರೋಪ ಸುಳ್ಳು. ತಾನು ಬಾಗಪ್ಪನ ಸಹಚರ ಎಂದು ಹೇಳಿಕೊಂಡು ಹಣ ಸುಲಿಗೆ ಮಾಡಿಲ್ಲ ಎಂದು ಕಿರಣ್ ಹೇಳಿದ್ದಾನೆ.

Intro:ವಿಜಯಪುರ Body:ವಿಜಯಪುರ; ಇಷ್ಟು ದಿನಗಳ ಕಾಲ ತಣ್ಣಗಿದ್ದ ಭೀಮಾತೀರದಲ್ಲಿಗ ಮತ್ತೆ ರಕ್ತದ‌ ಕಲೆ ಬಿಳುತ್ತಾ ಅನ್ನೋ ಅನುಮಾನ ಶುರುವಾಗಿದೆ. ಗುಂಡಿನ ದಾಳಿಗೆ ಒಳಗಾಗಿ ಸಾವಿನ ಕದತಟ್ಟಿ ಬಂದಿರುವ ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ತನ್ನ ವಿರೋಧಿಗಳಿಗೆ ಆವಾಜ್ ಹಾಕಿದ್ದಾರೆ. ನನ್ನ ವಿರುದ್ಧ ಬಂದ್ರೆ ಹಣೆಗೆ ಬಂದೂಕು‌ ಇಟ್ಟು ಹೋಡಿತಿನಿ ಅನ್ನೋ ಮೂಲಕ ಭೀಮಾತೀರದ ಹಂತಕರ ಕುಟುಂಬಗಳಲ್ಲಿ ‌ಸಂಚಲನ ಮೂಡಿಸಿದೆ
ಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಮತ್ತೆ ರಕ್ತದ ಕೋಡಿ ಹರಿಯುತ್ತಾ ಜಿಲ್ಲೆಯ ಜನ ಭಯದಲ್ಲಿದ್ದಾರೆ. ಪ್ರಕರಣವೊಂದರೆ ವಿಚಾರಣೆಗಾಗಿ ಕೋರ್ಟ್ ಗೆ ಆಗಮಿಸಿದ ಭಾಗಪ್ಪ ಹರಿಜನ್, ನನ್ನ ಉಸಾಬರಿಗೆ ಯಾರಾದರೂ ಬಂದರೆ 24 ಗಂಟೆಗಳಲ್ಲಿಯೇ ಬಂದೂಕು ಹಿಡಿಯುತ್ತೇನೆ. ಹಣಗೆ ಹಚ್ಚಿ ಹೊಡೆಯುತ್ತೇನೆ ಎಂದು ಗುಡುಗಿದ್ದಾನೆ. ಭೀಮಾತೀರದ ಹಂತಕನಾಗಿದ್ದ, ಪೊಲೀಸ್ ಎನಕೌಂಟರಗೆ ಬಲಿಯಾದ ಚಂದಪ್ಪ ಹರಿಜನ, ಸಂಬಂಧಿಕರು ನನಗೆ ಕಿರುಕುಳ ಕೊಡುತ್ತಿದ್ದಾರೆ. ನಾನೂ ಕಮಜೋರ್ ಅಲ್ಲ ಎಂದು ಚಂದಪ್ಪ ಹರಿಜನ್ ಸಂಬಂಧಿಕರಿಗೆ ಎಚ್ಚರಿಕೆ ‌ನೀಡಿದ್ದಾನೆ.‌ ಆಸ್ತಿ ವಿಚಾರವಾಗಿ ಚಂದಪ್ಪನ ಕುಟುಂಬಸ್ಥರ ಹಾಗೂ ನನ್ನ ಮಧ್ಯೆ ದ್ವೇಷ ಉಂಟಾಗಿದೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲಾ ಸುಳ್ಳು. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ನನಗೆ ಚಂದಪ್ಪ ಹರಿಜನ ಸಂಬಂಧಿಕರು ಕಿರುಕುಳ‌ ನೀಡುತ್ತಿದ್ದಾರೆ ಎಂದು ದೂರಿದ್ದಾರೆ
ಇದೇ ಜಿಲ್ಲೆಯಲ್ಲಿ ಭಾಗಪ್ಪನ‌ ಹೆಸರಿನಲ್ಲಿ ವಸೂಲಿ‌ ದಂಧೆ ನಡೆಯುತ್ತಿದೆ ಅನ್ನೋ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಭಾಗಪ್ಪ‌ ಹರಿಜನ್, ನನ್ನ ಹೆಸರು ಹೇಳಿ ಕೆಲವರು ವಸೂಲಿ ದಂಧೆ ಮಾಡುತ್ತಿದ್ದಾರೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ವಿಜಯಪುರ ನಗರದ ವಜ್ರ ಹನುಮಾನ ಗುಡಿಯ ಬಳಿಯ ಕಿರಣ್ ಎಂಬ ವ್ಯಕ್ತಿ ಜಮಖಂಡಿಯಲ್ಲಿ ಹೇಳಿ ಅಮಾಯಕರಿಂದ ಹಣ ವಸೂಲಿ ಮಾಡಿದ್ದಾನೆ. ಆತನಿಂದ ಹಣ ವಾಪಸ್ ನೀಡಿ ಎಂದು ಹಣ ನೀಡಿದವರು ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾನಂತೆ. ಬಾಗಪ್ಪನ ಸಹಚರನೆಂದು ಹೇಳುತ್ತಿದ್ದಾನಂತೆ. ಈ ನಿಟ್ಟಿನಲ್ಲಿ  
ಅವರು ದೂರು ನೀಡಲು ಪೊಲೀಸರು ಸೂಚಿಸಿದರೆ ನಾನು ದೂರು ನೀಡುತ್ತೇನೆಂದು ಬಾಗಪ್ಪಾ ಸ್ಪಷ್ಟಪಡಿಸಿದ್ದಾರೆ. ಆದರೆ ಭಾಗಪ್ಪ ಆರೋಪವನ್ನು ತಳ್ಳಿಹಾಕಿರುವ ಆತನ ಸಹಚರನಾಗಿದ್ದ ಕಿರಣ್, ಇದು ಸುಳ್ಳು ನಾನು ಯಾರ ಬಳಿಯೂ ಹಣ ವಸೂಲಿ ಮಾಡಿಲ್ಲ ಎಂದಿದ್ದರು.
ಸದ್ಯ ನನ್ನ ತಂಟೆಗೆ ಯಾರೂ ಬರಬೇಡಿ ಎಂಬ ವಾರ್ನಿಂಗ್ ನ್ನು ಬಾಗಪ್ಪ ನೀಡಿದ್ದಾನೆ. ಚಂದಪ್ಪಪನ ಸಂಬಂಧಿಕರೇ ನನ್ನ ವೈರಿಗಳು ಎಂಬುದನ್ನೂ ಸೂಚ್ಯವಾಗಿ ಹೇಳಿದ್ದಾನೆ. ಇದು ಮುಂದಿನ ದಿನಗಳಲ್ಲಿ ಎಲ್ಲಿ ಹೋಗಿ ಮುಟ್ಟುತ್ತದೆಯೋ ಕಾಯ್ದು ನೋಡಬೇಕಿದೆ. Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.