ETV Bharat / state

22 ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ಶಿವಾನಂದ ಪಾಟೀಲ್​

ಲಾಕ್​ಡೌನ್​​ನಿಂದ ಅನೇಕ ಬಡವರು ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ 22 ಸಾವಿರ ಕುಟುಂಬಗಳಿಗೆ ಕನಿಷ್ಠ 15 ದಿನಗಳಿಗೆ ಆಗುವಷ್ಟು 17 ಬಗೆಯ ಆಹಾರ ಪದಾರ್ಥಗಳ ಕಿಟ್ ತಲುಪಿಸುತ್ತಿದ್ದೇವೆ ಎಂದು ಶಾಸಕ ಶಿವಾನಂದ ಪಾಟೀಲ್​ ತಿಳಿಸಿದ್ದಾರೆ.

author img

By

Published : May 5, 2020, 3:11 PM IST

Shivananda Patil distributes food kit to 22,000 poor families
22 ಸಾವಿರ ಬಡ ಕುಟಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಶಿವಾನಂದ ಪಾಟೀಲ್

ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಕೊರೊನಾ ಆತಂಕದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ಶಾಸಕ ಶಿವಾನಂದ ಪಾಟೀಲ್​, ಗೆಳೆಯರ ಬಳಗ ಹಾಗೂ ಡಿಸಿಸಿ ಬ್ಯಾಂಕ್ ಸಹಯೋಗದೊಂದಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.

ಗ್ರಾಮೀಣ ಭಾಗದ ಬಡ ಜನರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯಕ್ಕೆ ಶಾಸಕರು ಮುಂದಾಗಿದ್ದಾರೆ‌.

22 ಸಾವಿರ ಬಡ ಕುಟಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಶಿವಾನಂದ ಪಾಟೀಲ್

ನಂತರ ಮಾತನಾಡಿದ ಅವರು, ಲಾಕ್​ಡೌನ್​​ನಿಂದ ಅನೇಕ ಬಡವರು ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ 22 ಸಾವಿರ ಕುಟುಂಬಗಳಿಗೆ ಕನಿಷ್ಠ 15 ದಿನಗಳಿಗೆ ಸಾಕಾಗುವಷ್ಟು 17 ಬಗೆಯ ಆಹಾರ ಪದಾರ್ಥಗಳ ಕಿಟ್ ತಯಾರಿಸಿ ತಲುಪಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಬೇರೆ ಹಳ್ಳಿಗಳಲ್ಲಿ ಕಿಟ್ ಹಂಚುವ ಬಗ್ಗೆ ನಿರ್ಧರಿಸುತ್ತೇವೆ ಎಂದರು.

ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಕೊರೊನಾ ಆತಂಕದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ಶಾಸಕ ಶಿವಾನಂದ ಪಾಟೀಲ್​, ಗೆಳೆಯರ ಬಳಗ ಹಾಗೂ ಡಿಸಿಸಿ ಬ್ಯಾಂಕ್ ಸಹಯೋಗದೊಂದಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.

ಗ್ರಾಮೀಣ ಭಾಗದ ಬಡ ಜನರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯಕ್ಕೆ ಶಾಸಕರು ಮುಂದಾಗಿದ್ದಾರೆ‌.

22 ಸಾವಿರ ಬಡ ಕುಟಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಶಿವಾನಂದ ಪಾಟೀಲ್

ನಂತರ ಮಾತನಾಡಿದ ಅವರು, ಲಾಕ್​ಡೌನ್​​ನಿಂದ ಅನೇಕ ಬಡವರು ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ 22 ಸಾವಿರ ಕುಟುಂಬಗಳಿಗೆ ಕನಿಷ್ಠ 15 ದಿನಗಳಿಗೆ ಸಾಕಾಗುವಷ್ಟು 17 ಬಗೆಯ ಆಹಾರ ಪದಾರ್ಥಗಳ ಕಿಟ್ ತಯಾರಿಸಿ ತಲುಪಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಬೇರೆ ಹಳ್ಳಿಗಳಲ್ಲಿ ಕಿಟ್ ಹಂಚುವ ಬಗ್ಗೆ ನಿರ್ಧರಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.