ETV Bharat / state

ಫೆ.26ರಂದು ವಿಜಯಪುರದಲ್ಲಿ ಪಂಚಮಸಾಲಿ ಲಿಂಗಾಯತ ವಧು-ವರರ ಸಮಾವೇಶ

ಶಿವಮೊಗ್ಗದ ಗುರುಶಾಂತ ವೀರೇಶ್ವರ ಸೇವಾ ಸಮಿತಿ ವಿವಾಹ ಮಾಡಿಸುವುದಲ್ಲದೇ, ಸಮಾಜದ ಬಡವರಿಗೆ ನಿವೇಶನಗಳನ್ನು ನೀಡುತ್ತಾ ಬಂದಿದೆ ಎಂದು ಮಹಾಲಿಂಗಯ್ಯ ಶಾಸ್ತ್ರಿ ಹೇಳಿದರು.

author img

By

Published : Feb 24, 2023, 5:43 PM IST

ಮಹಾಲಿಂಗಯ್ಯ ಶಾಸ್ತ್ರಿ
ಮಹಾಲಿಂಗಯ್ಯ ಶಾಸ್ತ್ರಿ

ವಿಜಯಪುರ: ಸಮಾಜಮುಖಿ ಸೇವೆಗಳಿಂದ ಹೆಸರಾಗಿರುವ ಶಿವಮೊಗ್ಗದ ಗುರುಶಾಂತ ವೀರೇಶ್ವರ ಸೇವಾ ಸಮಿತಿ ವತಿಯಿಂದ ವಿಜಯಪುರ ನಗರದ ಲಿಂಗಾಯತ ಸಮುದಾಯ ಭವನದಲ್ಲಿ ಫೆ.26 ರ ಭಾನುವಾರ ಬೆಳಗ್ಗೆ 11ಕ್ಕೆ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಮಹಾಲಿಂಗಯ್ಯ ಶಾಸ್ತ್ರಿ ಎಸ್.ನಂದಗಾಂವಿ ಮಠ ಹೇಳಿದರು.

ಶುಕ್ರವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 22 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಸ್ಥಾಪನೆಯಾದ ಈ ಸಮಿತಿ ಸಮಾಜಮುಖಿ ಸೇವಾ ಟ್ರಸ್ಟ್​ ಆಗಿದೆ. ಇದರಿಂದ ಲಿಂಗಾಯತ ಸಮುದಾಯಕ್ಕೆ ಹಲವು ಕೊಡುಗೆಗಳನ್ನು ನೀಡಲಾಗಿದೆ. ಸಮಾಜಕ್ಕೂ ಹಲವಾರು ಕೊಡುಗೆಗಳನ್ನು ಕೊಡುತ್ತಾ ಬಂದಿದ್ದು ಈಗ ರಾಜ್ಯದ 14 ಶಾಖೆಗಳಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಅನುಕೂಲ ಆಗಲಿ ಎಂದು ರಾಜ್ಯಾದ್ಯಂತ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ಹಮ್ಮಿಕೊಳ್ಳುತ್ತಿದ್ದೇವೆ. ಶಿವಮೊಗ್ಗ, ಸಾಗರ, ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಬೆಳಗಾವಿಗಳಲ್ಲಿಯೂ ಕಾರ್ಯಕ್ರಮ ಮಾಡಿದ್ದೇವೆ. ಇದೀಗ 26ನೇ ತಾರೀಖಿನಂದು ಕೊನೆಯದಾಗಿ ವಿಜಯಪುರದಲ್ಲಿಯೂ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮಕ್ಕೆ ಡಾಕ್ಟರ್ಸ್​​, ಇಂಜಿನಿಯರ್​, ವಾಣಿಜ್ಯೋದ್ಯಮಿಗಳು ಸೇರಿದಂತೆ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿಯೂ ಓದುವುದರಲ್ಲಿ ಮೊದಲಿದ್ದವರು ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ : 'ರಾಜಕಾರಣಕ್ಕೆ ದೇವೇಗೌಡರು ಆದರ್ಶ': ವಿದಾಯ ಭಾಷಣದಲ್ಲಿ ಬಿ.ಎಸ್‌.ಯಡಿಯೂರಪ್ಪ

ಇದುವರೆಗೂ ರಾಜ್ಯಾದ್ಯಂತ ಏಳು ಸಾವಿರ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. 1,300 ಮದುವೆ ಮಾಡಿರುವ ಖ್ಯಾತಿ ಸಂಸ್ಥೆಗಿದೆ. ಕಳೆದ 22 ವರ್ಷಗಳಿಂದ ನಮ್ಮ ಟ್ರಸ್ಟ್​ ಶಿವಮೊಗ್ಗದಲ್ಲಿ ಸೇವೆ ಮಾಡುತ್ತಾ ಬಂದಿದೆ. ಸೇವಾ ಟ್ರಸ್ಟ್​ನಿಂದ ವಿವಾಹ ಮಾಡಿಸುವುದು ಮಾತ್ರವಲ್ಲದೇ ಬಡವರಿಗೆ ನಿವೇಶನಗಳನ್ನೂ ನೀಡಲಾಗಿದೆ. ಪ್ರತಿಭಾ ಪುರಸ್ಕಾರ, ಸಾಮೂಹಿಕ ಮದುವೆಗಳನ್ನು ಮಾಡಿಸುತ್ತಾ ಬಂದಿದ್ದೇವೆ. ಕೊರೊನಾ ಸಮಯದಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೂ ಕಿಟ್​ಗಳನ್ನು ಹಂಚಿದ್ದೇವೆ.

ಇದನ್ನೂ ಓದಿ: ಆಧಾರ ರಹಿತ ಆರೋಪ ಸಿಎಂಗೆ ಶೋಭೆ ತರಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ವಧು-ವರರ ಸಮಾವೇಶದಲ್ಲಿ ಸರ್ಕಾರಿ ನೌಕರರು, ವಾಣಿಜ್ಯೋದ್ಯಮಿಗಳು, ಖಾಸಗಿ ಉದ್ಯಮಿಗಳು ಸೇರಿದಂತೆ ವಿಧವೆ, ವಿಧುರ, ವಿಶೇಷಚೇತನರೂ ಭಾಗವಹಿಸಬಹುದು. ಫೆಬ್ರವರಿ 26ರಂದು ವಿಜಯಪುರದ ಬಂಜಾರ ಹೈಸ್ಕೂಲ್ ಬಳಿಯ ಲಿಂಗಾಯತ ಭವನದಲ್ಲಿ ಸಮಾವೇಶಗಳನ್ನು ಆಯೋಜಿಸಲಾಗಿದೆ. www.lingayathweds.com ವೆಬ್​ಸೈಟ್ಸ್​ ಮೂಲಕ ಮದುವೆ ಸಂಬಂಧಗಳನ್ನು ಬೆಸೆಯುತ್ತಿದೆ. ಆಸಕ್ತರು 08352264130, 876248130 ನಂಬರ್​ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಹಾಗೂ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಇದನ್ನೂ ಓದಿ: ತೋಟಗಾರಿಕಾ ಇಲಾಖೆ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ

ವಿಜಯಪುರ: ಸಮಾಜಮುಖಿ ಸೇವೆಗಳಿಂದ ಹೆಸರಾಗಿರುವ ಶಿವಮೊಗ್ಗದ ಗುರುಶಾಂತ ವೀರೇಶ್ವರ ಸೇವಾ ಸಮಿತಿ ವತಿಯಿಂದ ವಿಜಯಪುರ ನಗರದ ಲಿಂಗಾಯತ ಸಮುದಾಯ ಭವನದಲ್ಲಿ ಫೆ.26 ರ ಭಾನುವಾರ ಬೆಳಗ್ಗೆ 11ಕ್ಕೆ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಮಹಾಲಿಂಗಯ್ಯ ಶಾಸ್ತ್ರಿ ಎಸ್.ನಂದಗಾಂವಿ ಮಠ ಹೇಳಿದರು.

ಶುಕ್ರವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 22 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಸ್ಥಾಪನೆಯಾದ ಈ ಸಮಿತಿ ಸಮಾಜಮುಖಿ ಸೇವಾ ಟ್ರಸ್ಟ್​ ಆಗಿದೆ. ಇದರಿಂದ ಲಿಂಗಾಯತ ಸಮುದಾಯಕ್ಕೆ ಹಲವು ಕೊಡುಗೆಗಳನ್ನು ನೀಡಲಾಗಿದೆ. ಸಮಾಜಕ್ಕೂ ಹಲವಾರು ಕೊಡುಗೆಗಳನ್ನು ಕೊಡುತ್ತಾ ಬಂದಿದ್ದು ಈಗ ರಾಜ್ಯದ 14 ಶಾಖೆಗಳಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಅನುಕೂಲ ಆಗಲಿ ಎಂದು ರಾಜ್ಯಾದ್ಯಂತ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ಹಮ್ಮಿಕೊಳ್ಳುತ್ತಿದ್ದೇವೆ. ಶಿವಮೊಗ್ಗ, ಸಾಗರ, ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಬೆಳಗಾವಿಗಳಲ್ಲಿಯೂ ಕಾರ್ಯಕ್ರಮ ಮಾಡಿದ್ದೇವೆ. ಇದೀಗ 26ನೇ ತಾರೀಖಿನಂದು ಕೊನೆಯದಾಗಿ ವಿಜಯಪುರದಲ್ಲಿಯೂ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮಕ್ಕೆ ಡಾಕ್ಟರ್ಸ್​​, ಇಂಜಿನಿಯರ್​, ವಾಣಿಜ್ಯೋದ್ಯಮಿಗಳು ಸೇರಿದಂತೆ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿಯೂ ಓದುವುದರಲ್ಲಿ ಮೊದಲಿದ್ದವರು ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ : 'ರಾಜಕಾರಣಕ್ಕೆ ದೇವೇಗೌಡರು ಆದರ್ಶ': ವಿದಾಯ ಭಾಷಣದಲ್ಲಿ ಬಿ.ಎಸ್‌.ಯಡಿಯೂರಪ್ಪ

ಇದುವರೆಗೂ ರಾಜ್ಯಾದ್ಯಂತ ಏಳು ಸಾವಿರ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. 1,300 ಮದುವೆ ಮಾಡಿರುವ ಖ್ಯಾತಿ ಸಂಸ್ಥೆಗಿದೆ. ಕಳೆದ 22 ವರ್ಷಗಳಿಂದ ನಮ್ಮ ಟ್ರಸ್ಟ್​ ಶಿವಮೊಗ್ಗದಲ್ಲಿ ಸೇವೆ ಮಾಡುತ್ತಾ ಬಂದಿದೆ. ಸೇವಾ ಟ್ರಸ್ಟ್​ನಿಂದ ವಿವಾಹ ಮಾಡಿಸುವುದು ಮಾತ್ರವಲ್ಲದೇ ಬಡವರಿಗೆ ನಿವೇಶನಗಳನ್ನೂ ನೀಡಲಾಗಿದೆ. ಪ್ರತಿಭಾ ಪುರಸ್ಕಾರ, ಸಾಮೂಹಿಕ ಮದುವೆಗಳನ್ನು ಮಾಡಿಸುತ್ತಾ ಬಂದಿದ್ದೇವೆ. ಕೊರೊನಾ ಸಮಯದಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೂ ಕಿಟ್​ಗಳನ್ನು ಹಂಚಿದ್ದೇವೆ.

ಇದನ್ನೂ ಓದಿ: ಆಧಾರ ರಹಿತ ಆರೋಪ ಸಿಎಂಗೆ ಶೋಭೆ ತರಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ವಧು-ವರರ ಸಮಾವೇಶದಲ್ಲಿ ಸರ್ಕಾರಿ ನೌಕರರು, ವಾಣಿಜ್ಯೋದ್ಯಮಿಗಳು, ಖಾಸಗಿ ಉದ್ಯಮಿಗಳು ಸೇರಿದಂತೆ ವಿಧವೆ, ವಿಧುರ, ವಿಶೇಷಚೇತನರೂ ಭಾಗವಹಿಸಬಹುದು. ಫೆಬ್ರವರಿ 26ರಂದು ವಿಜಯಪುರದ ಬಂಜಾರ ಹೈಸ್ಕೂಲ್ ಬಳಿಯ ಲಿಂಗಾಯತ ಭವನದಲ್ಲಿ ಸಮಾವೇಶಗಳನ್ನು ಆಯೋಜಿಸಲಾಗಿದೆ. www.lingayathweds.com ವೆಬ್​ಸೈಟ್ಸ್​ ಮೂಲಕ ಮದುವೆ ಸಂಬಂಧಗಳನ್ನು ಬೆಸೆಯುತ್ತಿದೆ. ಆಸಕ್ತರು 08352264130, 876248130 ನಂಬರ್​ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಹಾಗೂ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಇದನ್ನೂ ಓದಿ: ತೋಟಗಾರಿಕಾ ಇಲಾಖೆ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.